ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಆದರೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳಿಗೂ ತಲೆ ನೋವಾಗಿದೆ.
ಅಭ್ಯರ್ಥಿಗಳು ಆಗಲು ಬಯಸಿರುವ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಇಲ್ಲದ ಒತ್ತಡ ಹೇರುತ್ತಿದ್ದಾರೆ. ತಮಗೆ ಟಿಕೇಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಇಲ್ಲದಿದ್ದರೆ ಬಂಡಾಯದ ಬಾವುಟ ಹಾರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೆಲವರಂತೂ ಸಾಮಾಜಿಕ ಜಾಲತಾಣದಲ್ಲಿ ನಾಯಕರ ನಡೆಗೆ, ಶಾಸಕರ ಅಸಹಾಯಕತೆ ಕುರಿತು ನೋವು ತೋಡಿಕೊಳ್ಳುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಬಿಜೆಪಿ 26 ವಾರ್ಡ್ ಗಳ ಅಭ್ಯರ್ಥಿಗಳ ಹೆಸರು ಅಂತಿಮ ಗೊಳಿಸಿ ಮಹಾನಗರ ಜಿಲ್ಲಾಧ್ಯಕ್ಷ ಆಗಿರುವ ಶಾಸಕ ಅರವಿಂದ ಬೆಲ್ಲದ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಅಂತು ಇಂತು ಹಲವು ಗುದ್ದಾಟ, ಪ್ರತಿಷ್ಟೆ ನಡುವೆ ಮೊದಲ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ.
ಹಲವು ಮಾಜಿ ಸದಸ್ಯರು ಸೇರಿದಂತೆ ಹೊಸಬರಿಗೆ ಮಣೆ ಹಾಕಲಾಗಿದೆ.
ಧಾರವಾಡದ ವಾರ್ಡ್ ನಂ. 3 ಕ್ಕೆ ವೀರೇಶ ಅಂಚಟಗೇರಿ, 7ಕ್ಕೆ ರವಿ ಎಲಿಗಾರ, 8ಕ್ಕೆ ಶಂಕರ ಶೆಳಕೆ, 9ಕ್ಕೆ ರತ್ನಾ ಎಕನಾಥ ನಾಜರೆ,12 ಕ್ಕೆ ವಿಜಯಾನಂದ ಶೆಟ್ಟಿ,
13ಕ್ಕೆ ಸುರೇಶ ಬೇದ್ರೆ,17ಕ್ಕೆ ಮಲ್ಲೇಶಿ ಮಮ್ಮಿಗಟ್ಟಿ , 18ಕ್ಕೆ ಶಿವು ಹಿರೇಮಠ,20ಕ್ಕೆ ಗೀತಾ ಗೌಡಪ್ಪ ಪಾಟೀಲ,21ಕ್ಕೆ ಆನಂದ ಯಾವಗಲ,29ಕ್ಕೆ ಮಲ್ಲಿಕಾರ್ಜುನ ಹೊರಕೇರಿ ಅವರ ಹೆಸರು ಅಂತಿಮಗೊಳಿಸಲಾಗಿದೆ.
ಇನ್ನುಳಿದಂತೆ ಮಾಜಿ ಮೇಯರ್ ವೀರಣ್ಣ ಸವಡಿ, ಪಾಂಡುರಂಗ ಪಾಟೀಲ, ಮುಖಂಡರಾದ ಮಹೇಂದ್ರ ಕೌತಾಳ, ಸತೀಶ ಹಾನಗಲ್, ರಾಮಣ್ಣ ಬಡಿಗೇರ ಸೇರಿದಂತೆ ಹಲವರಿಗೆ ಸೆಂಟ್ರಲ್ ಹಾಗೂ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಟಿಕೇಟ್ ನೀಡಲಾಗಿದೆ.
ಇದರಲ್ಲಿ ಹಲವು ವಾರ್ಡ್ ಗಳಿಗೆ ಬಂಡಾಯದ ಬಾವುಟ ಹಾರುವುದು ನಿಶ್ಚಿತವಾಗಿದೆ.