ಧಾರವಾಡ ಪ್ರಜಾಕಿರಣ.ಕಾಮ್ :
ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರಿಗೆ ಮೌಲ್ಯಮಾಪನ ಪರೀಕ್ಷಾ ಭತ್ಯೆ ಕೊಡದೇ ಸತಾಯಿಸುತ್ತಿರುವ ಕವಿವಿ ಆಡಳಿತ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಾವಿರಕ್ಕೂ ಹೆಚ್ಚು ಶಿಕ್ಷಕರು ಸಿಡಿದೆದ್ದಿದ್ದಾರೆ.
ಮೌಲ್ಯಮಾಪನ ಬಹಿಷ್ಕರಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ ಇತ್ತೀಚೆಗೆ ಅರಾಜಕತೆಗೆ ಸಾಕ್ಷಿಯಾಗುತ್ತಿದೆಯೇ ಎಂಬ ಭಾವನೆ ಬರುತ್ತಿದೆ. ಏಕೆಂದರೆ ಸರಕಾರ ಪ್ರಾಧ್ಯಾಪಕರಿಗೆ ಪರೀಕ್ಷೆ ಭತ್ತೆ ಕೊಡದೆ ಅವರನ್ನು ಸತಾಯಿಸುತ್ತಿರುವುದು ಕಂಡು ಬಂದಿದೆ.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಫಲಿತಾಂಶ ತಡವಾಗಿ ಬಂದು ಮುಂದೆ ವಿವಿಧ ಪರೀಕ್ಷೆಗಳಿಗೆ ತೊಂದರೆ ಆಗಲಿದೆ ಎಂದು ರಾಜ್ಯದ ಬಿಜೆಪಿಯ ಬೇಜವಾಬ್ದಾರಿ ಸರಕಾರದ ಹಾಗೂ ಕವಿವಿ ವಿರುದ್ಧ ಕಾಂಗ್ರೆಸ್ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶನಿವಾರ ಸರಕಾರಿ ಕಾಲೇಜುಗಳ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಚೆಕ್ ಮಾಡದೇ ಮೌನ ಪ್ರತಿಭಟನೆಯಲ್ಲಿ ಮಾಡಿದ್ದಾರೆ.
ಪರೀಕ್ಷೆ ಭತ್ಯೆ 2019 ರಿಂದ ಕೊಡದೆ ಕಾರಣ
ಉತ್ತರ ಪತ್ರಿಕೆ ಮೌಲ್ಯ ಮಾಪನ ಬಹಿಷ್ಕರಿಸಿದ್ದಾರೆ ಇದಕ್ಕೆ ಕವಿವಿ ಆಡಳಿತ ವರ್ಗ ಕಾರಣ ಎಂದು ನೀರಲಕೇರಿ ಕಿಡಿಕಾರಿದರು.
ಪರೀಕ್ಷೆ ಮೌಲ್ಯಮಾಪಕ ಮಾಡಲು ಆಯಾ ವಿವಿಗಳಿಗೆ ಬರುವ ಸರ್ಕಾರಿ ಕಾಲೇಜುಗಳಿಗೆ ಪರೀಕ್ಷೆ ಭತ್ಯೆ ಹಾಗೂ ಇನ್ನಿತರ ಭತ್ಯೆಗಳನ್ನು ಸದ್ಯದ ಮಟ್ಟಿಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳದ್ದೇ ಹೊಣೆ ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದರೂ ಕವಿವಿ ಮೊಂಡುತನ ಪ್ರದರ್ಶಿಸುತ್ತಿರುವುದು ಸರಿಯಲ್ಲ.
ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಗಳಿಗೆ ಪ್ರಾಧ್ಯಾಪಕರಿಗೆ ಭತ್ಯೆ ಕೊಡು ಎಂದು ಹೇಳಿದರೂ ಹಣಕಾಸು ಅಧಿಕಾರಿ ಕೊಡದೇ ಸರ್ವಾಧಿಕಾರಿ ಧೋರಣೆ ಮುಂದುವರೆಸಿರುವುದು ಅತ್ಯಂತ ಖಂಡನೀಯ.
ಕೂಡಲೇ ಸಮಸ್ಯೆ ಸರಿಪಡಿಸದಿದ್ದರೇ ಕವಿವಿ ಹಣಕಾಸು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪಿ.ಎಚ್. ನೀರಲಕೇರಿ, ಎಚ್ಚರಿಸಿದರು.