ರಾಜ್ಯ

ಧಾರವಾಡದ ಐ ಐ ಟಿ ಉದ್ಘಾಟನೆಗೆ ಜನರನ್ನು ಸೇರಿಸಲು ಬಿಜೆಪಿಯಿಂದ ಆಡಳಿತ ಯಂತ್ರ ದುರುಪಯೋಗ : ಕೋನರೆಡ್ಡಿ ಕಿಡಿ

ಧಾರವಾಡ ಪ್ರಜಾಕಿರಣ.ಕಾಮ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಧಾರವಾಡದ ಐ ಐ ಟಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದು ಈ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಬಿಜೆಪಿ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡಿದೆ.

ಪ್ರತಿ ಗ್ರಾಮದಿಂದ ವಿವಿಧ ಇಲಾಖೆಯಡಿ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳನ್ನು, ಮಾಶಾಸನ ಪಡೆಯುತ್ತಿರುವ ವಯೋ ವೃದ್ಧರನ್ನು ಬಸ್ ಮೂಲಕ ಕರೆದುಕೊಂಡು ಬರಲು ಆಯಾ ತಾಲ್ಲೂಕಿನ ತಹಶೀಲ್ದಾರ ಹಾಗೂ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಕಂದಾಯ ಹಾಗೂ ಪಿಡಿಒಗಳಿಗೆ ಒತ್ತಡ ಹೇರಲಾಗಿದೆ.

ಪ್ರತಿ ಗ್ರಾಮಗಳಿಂದ 250 ರಿಂದ 300 ಜನರನ್ನು ಐ ಐ ಟಿ ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ಬಸ್‌ಗಳನ್ನೂ ಸಹ ಜಿಲ್ಲಾಡಳಿತದಿಂದಲೇ ನಿಗದಿ ಮಾಡಿದ್ದಾರೆ.

ಇದರ ಜೊತೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪಿಜಿ, ಕೋಚಿಂಗ್ ಸೆಂಟರ್ ಗಳಿಗೆ ಪ್ರಭಾವ ಬೀರಿ ಬಸ್ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿರುವುದು ಯಾವ ಪುರುಷಾರ್ಥಕ್ಕೆ ….!?

ಇದು IIT ಉದ್ಘಾಟನೆಯೋ ? ಅಥವಾ ಫಲಾನುಭವಿಗಳ ಸಮಾವೇಶವೋ ? ಇಲ್ಲಾ ಆಡಳಿತ ಯಂತ್ರದ ದುರ್ಬಳಕೆಯೋ ? ಎಂದು ಕಾಂಗ್ರೆಸ್ ಮುಖಂಡ, ನವಲಗುಂದ ಕ್ಷೇತ್ರದ ಮಾಜಿ ಶಾಸಕರಾದ ‌ಎನ್.ಹೆಚ್. ಕೋನರಡ್ಡಿ ಅವರು ಕಿಡಿಕಾರಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *