ಧಾರವಾಡ prajakiran.com : ಪೋನ್ ಕದ್ದಾಲಿಕೆಯ ಬಗ್ಗೆ ನಾನೂ ಎಲ್ಲವನ್ನ ಪೋಲಿಸರಿಗೆ ಹೇಳಿದ್ದೆನೆ
ಎಂದು ಧಾರವಾಡ ಪಶ್ಚಿಮ ಬಿಜೆಪಿ
ಶಾಸಕ ಅರವಿಂದ ಬೆಲ್ಲದ ಹೇಳಿದರು.
ಅವರು ಸೋಮವಾರ ಧಾರವಾಡ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅದರ ಬಗ್ಗೆ ನಾನೇನೂ ಹೆಚ್ಚು ಮಾತನಾಡೋದಿಲ್ಲ ಎಂದು ಸ್ಷಷ್ಟ ಪಡಿಸಿದರು.
ಸೂತ್ತೂರು ಮಠಕ್ಕೆ ಅರವಿಂದ ಬೆಲ್ಲದ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು
ನಾನೂ ಸುತ್ತೂರು ಮಠದ ತಾಯಿ ಅವರು ಲಿಂಗೈಕ್ಯರಾಗಿದ್ರು ಹೀಗಾಗಿ ಹೋಗಿದ್ದೆ ಅಷ್ಟೆ ಎಂದರು.
ನನ್ನ ಕ್ಷೇತ್ರದಲ್ಲಿ ನನ್ನ ಬಗ್ಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ.
ದಿಲ್ಲಿಯಿಂದ ನಾಯಕರು ಬಂದಿದ್ರು ಅಂತ ನಾನು ಬೆಂಗಳೂರು ಮತ್ತು ದಿಲ್ಲಿಗೆ ಹೋಗಿದ್ದೆ.
ಕ್ಷೇತ್ರದಲ್ಲಿ ಅತಿಹೆಚ್ಚು ಪುಡ್ ಕಿಟ್ ಕೊಟ್ಟಿದ್ದೆ ನಾನು,
ನಾನು ಕ್ಷೇತ್ರದಲ್ಲಿ ಒಳ್ಳೆಯ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದೆನೆ ಎಂದು ಹೇಳಿದರು
ನಾನು ರಾಜಕೀಯವಾಗಿ ಯಾವುದೇ ಹೇಳಿಕೆಗಳನ್ನ ನೀಡೋದಿಲ್ಲ.
ಅದೆಲ್ಲ ಪಕ್ಷದ ಚೌಕಟ್ಟಿನ ನಾಲ್ಕು ಗೋಡೆಯಲ್ಲಿರೋದು.
ನಾನು ಬಹಿರಂಗವಾಗಿ ಯಾವುದೇ ಹೇಳಿಕೆಯನ್ನ ನೀಡೋದಿಲ್ಲ ಎಂದು
ಶಾಸಕ ಅರವಿಂದ ಬೆಲ್ಲದ ಜಾರಿಕೊಂಡರು..