ಜಮ್ಮು&ಕಾಶ್ಮೀರ್ prajakiran.com : ಇಲ್ಲಿನ ಸೋಪೋರ್ ಎಂದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್ ಉಗ್ರ ಮುದಸಿರ್ ಸೇರಿದಂತೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಜಮ್ಮು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್, ಉಗ್ರ ಸಂಘಟನೆ ಲಷ್ಕರ್ ನ ಕಮಾಂಡರ್ ಮುದಸಿರ್ ಪಂಡಿತ್, ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಸೇರಿದಂತೆ ಒಟ್ಟು ಮೂವರನ್ನು ಭಾರತೀಯ ಸೇನೆ ಎನ್ ಕೌಂಟರ್ ಮಾಡಿದೆ.
ಅಸ್ರಾರ್ ಅಲಿಯಾಸ್ ಅಬ್ದುಲ್ಲಾ ಪಾಕ್ ಮೂಲದ ಉಗ್ರನಾಗಿದ್ದು, ಉತ್ತರ ಕಾಶ್ಮೀರದಲ್ಲಿನ ಉಗ್ರ ಸಂಘನೆಯೊಂದಿಗೆ ಗುರುತಿಸಿಕೊಂಡಿದ್ದ ಎಂದು ಮಾಹಿತಿ ನೀಡಿದರು.