ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಸೋಂಕು ತನ್ನಅಟ್ಟಹಾಸ ಮೆರೆದಿದ್ದು, 239 ಜನರಿಗೆ ವಕ್ಕರಿಸಿದೆ. ಆ ಮೂಲಕ ಸೋಂಕಿತರ ಸಂಖ್ಯೆ 5452ಕ್ಕೆ ಬಂದು ನಿಂತಿದೆ.
ಇದೇ ವೇಳೆ ಇಬ್ಬರು ಸಾವನ್ನಪ್ಪಿದ್ದು, ಈವರೆಗೆ ಮೃತಪಟ್ಟಿದ್ದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಇಂದು 143 ಜನ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಚೇತರಿಕೆ ಕಂಡು ಬಿಡುಗಡೆಯಾಗಿದ್ದಾರೆ.
ಆ ಮೂಲಕ ಈವರೆಗೆ ಬಿಡುಗಡೆಯಾದವರ ಸಂಖ್ಯೆ 2132ಕ್ಕೆ ಏರಿಕೆಯಾಗಿದೆ. ಇನ್ನೂಳಿದ 3257 ಜನರು ರಾಜ್ಯದ ವಿವಿಧ ಕೋವಿಡ್ ನಿಯೋಜಿತ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ 10 ಜನ ಐಸಿಯು ನಲ್ಲಿ ವೆಂಟಿಲೇಟರ್ ಮೇಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ನಲ್ಲಿ ವಿವರಿಸಿದ್ದಾರೆ.
ಇದೇ ವೇಳೆ ಇಂದು 10 ಅಂತರ್ ರಾಷ್ಟ್ರೀಯ ಪ್ರಯಾಣಿಕರಿಗೆ ಸೋಂಕು ತಗುಲಿದ್ದು, 183 ಅಂತರ್ ರಾಜ್ಯ ಪ್ರಯಾಣಿಕರಿದ್ದಾರೆ.
ಭಾನುವಾರ ಅತಿ ಹೆಚ್ಚು ಕರೋನಾ ಸೋಂಕಿತರು ಕಲಬುರಗಿ ಹಾಗೂ ಯಾದಗಿರಿಯಲ್ಲಿ ಪತ್ತೆಯಾಗಿದ್ದು, ಎರಡು ಜಿಲ್ಲೆಯ ತಲಾ 39 ಜನರು ಪತ್ತೆಯಾಗಿದ್ದಾರೆ.
ಅದೇ ರೀತಿ ಕುಂದಾನಗರಿ ಬೆಳಗಾವಿಯಲ್ಲಿ 38 ಜನರಿಗೆ ಕರೋನಾ ವಕ್ಕರಿಸಿದ್ದರೆ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ 23 ಜನರಿಗೆ ಕರೋನಾ ತಗುಲಿದೆ.
ಅದೇ ರೀತಿ ದಕ್ಷಿಣ ಕನ್ನಡದಲ್ಲಿ 17, ದಾವಣಗೆರೆಯಲ್ಲಿ 17, ಉಡುಪಿ 13,ಶಿವಮೊಗ್ಗ 12, ವಿಜಯಪುರ 9, ಬೀದರ 7, ಬಳ್ಳಾರಿ 6, ಬೆಂಗಳೂರು ಗ್ರಾಮಾಂತರ 5, ಹಾಸನ 5, ಧಾರವಾಡ 3, ಗದಗ 2, ಉತ್ತರಕನ್ನಡ 2, ಮಂಡ್ಯ ಹಾಗೂ ರಾಯಚೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ಕಲಬರುಗಿ ಜಿಲ್ಲೆಗೆ ಸೌದಿಯಿಂದ ಬಂದಿದ್ದ ತಾಯಿ ಮಗನಿಗೆ ಸೋಂಕು ಬಂದಿದೆ. 65 ವಯಸ್ಸಿನ ತಾಯಿ ಹಾಗೂ ಮಗನಿಗೆ ಕರೋನಾ ಬೆಂಬಿಡದೆ ಕಾಡುತ್ತಿದೆ.
ಅದೇ ರೀತಿ ಬೀದರನ 7 ಮಹಾರಾಷ್ಟ್ರದಿಂದ ಬಂದವರಿಗೆ ಆದರೆ ಯಾದಗಿರಿ 39 ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಗದಗ ಜಿಲ್ಲೆಯಲ್ಲಿ ಇಂದು ಒಂದೇ ಕುಟುಂಬ ಇಬ್ಬರಿಗೆ ಸೋಂಕು ತಗುಲಿದ್ದು, ಗದಗ ತಾಲೂಕಿನ ಮುಳಗುಂದ ಗ್ರಾಮದ ಇಬ್ಬರಿಗೆ ಆವರಿಸಿದಂತಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಪಿ2519 ಸೋಂಕಿತ 61 ವರ್ಷದ ಬೆಂಗಳೂರಿನ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜೂನ್ 6ರಂದು ಐಸಿಯುನಲ್ಲಿ ವೆಂಟಿಲೇಟರ್ ಇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅದೇ ರೀತಿ ಪಿ-4315 ಸೋಂಕಿತ 57 ವರ್ಷದ ಪುರುಷ ಬೆಂಗಳೂರಿನ ನಿವಾಸಿ ಮಧುಮೇಹ, ರಕ್ತದೋತ್ತಡದ ಹಿನ್ನಲೆಯಲ್ಲಿ ಆನೆ ಕಾಲು, ಕ್ಯಾನ್ಸರ್ ನಿಂದ ಜೂನ್ 7ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.