ಕಲಬುರಗಿ prajakiran.com : ಭ್ರಷ್ಟಾಚಾರ ನಿಯಂತ್ರಣ ದಳದ ಬಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಎಸ್ ಡಿ ಎ ಬಿದ್ದ ಘಟನೆ ಗುರುವಾರ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ಬಿಇಓ ಪರಮೇಶ , ಎಸ್.ಡಿ.ಎ ಶಶಿಕಾಂತ್ ಬಂಧಿತ ಲಂಚಬಾಕಅಧಿಕಾರಿಗಳಾಗಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಹೆರಿಗೆ ರಜೆ ಮುಗಿಸಿ ಮರಳಿ ಶಾಲೆಗೆ ಕರ್ತವ್ಯಕ್ಕೆ ಹಾಜರು ಆಗಲು ಶಿಕ್ಷಕಿಯಿಂದ ಲಂಚ ಪಡೆಯುವಾಗ ಅರೆಸ್ಟ್ ಆಗಿದ್ದಾರೆ.
ಶಿಕ್ಷಕಿಯಿಂದ 5 ಸಾವಿರ ರೂಪಾಯಿ ಲಂಚ ಪಡೆದ ಎಸ್ ಡಿ ಎ ಶಶಿಕಾಂತ್ ಅವರು ಆ ಹಣ ವನ್ನು ಕಲಬುರಗಿ ನಗರದ ಲಕ್ಷ್ಮಿ ನಾರಾಯಣ ನಗರದ ಬಿ.ಇ ಓ ಮನೆಯಲ್ಲಿ
ಪರಮೇಶ್ ಗೆ ನೀಡಿದ್ದಾರೆ. ಹೀಗಾಗಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.
ಈ ಸಂದರ್ಭ ಮಿಂಚಿನ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅವರಿಬ್ಬರನ್ನು ಲಂಚದ ಹಣ ಪಡೆಯುವಾಗ ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.