- ಅಶ್ವಿನಿ ನಕ್ಷತ್ರ : ಅಶ್ವಿನಿಕುಮಾರರ ಪೂಜೆ ಫಲ : ದೀರ್ಘಾಯಸ್ಸು ಮತ್ತು ವ್ಯಾಧಿ ಪರಿಹಾರ
- ಭರಣಿ ನಕ್ಷತ್ರ : ಕಪ್ಪು ಹೂವಿನಿಂದ ಯಮನಿಗೆ ಪೂಜೆ : ಕರ್ಪೂರಾದಿ ಗಂಧದಿಂದ ಲೇಪನಮ ಅಪಮೃತ್ಯೂ ಪರಿಹಾರ ಫಲ
- ಕೃತ್ತಿಕಾ ನಕ್ಷತ್ರ : ಅಗ್ನಿಗೆ ಕೆಲವು ಪುಷ್ಪಗಳಿಂದ ಪೂಜೆ : ಯತೇಚ್ಛ ಫಲ ಪ್ರಾಪ್ತಿ
- ರೋಹಿಣಿ ನಕ್ಷತ್ರ : ಅಧಿದೇವತಾ ಬ್ರಹ್ಮನಿಗೆ ಪೂಜೆ : ಅಭಿಲಾಷಾ ಪೂರ್ತಿಯೇ ಫಲ
- ಮೃಗಶಿರ ನಕ್ಷತ್ರ : ಚಂದ್ರನ ಪೂಜೆ, ಆರೋಗ್ಯ ಪ್ರಾಪ್ತಿಯ ಫಲ
- ಆರ್ಧ್ರಾ ನಕ್ಷತ್ರ : ಶಿವಪೂಜಾ, ಸುಂದರ ಕಮಲಗಳಿಂದ ಪೂಜೆ ಮಾಡಿದರೆ ಯಾವಾಗಲೂ ಕಲ್ಯಾಣ ಪ್ರಾಪ್ತಿ
- ಪುನರ್ವಸು ನಕ್ಷತ್ರ : ಆದಿತಿ ಪೂಜೆ, ತಾಯಿಯಂತೆ ಆದಿತಿಯು ಕಾಪಾಡುತ್ತಾಳೆ. ಇದೇ ಫಲ
- ಪುಷ್ಠ ನಕ್ಷತ್ರ : ಬ್ರಹಸ್ಪತಿ ಅವನ ಪೂಜೆಯಿಂದ ಸದ್ಬುದ್ದಿ, ಅಭಿವೃದ್ದಿಯೇ ಫಲ
- ಆಶ್ಲೇಷಾ ನಕ್ಷತ್ರ : ನಾಗಗಳ ಪೂಜೆ ಫಲ : ನಿರ್ಭಯತ್ವ ಮತ್ತು ಸರ್ಪಗಳು ಕಡಿಯುವುದಿಲ್ಲ
- ಮುಖ ನಕ್ಷತ್ರ : ಪಿತೃಗಣಗಳನ್ನು ಹವ್ಯಕವ್ಯಗಳಿಂದ ಪೂಜಿಸಿದರೆ ಧನ ಧಾನ್ಯ ಸೇವಕರು ಮಕ್ಕಳು ಹಾಗೆಯೇ ಪಶುಗಳು ಅಭಿವೃದ್ದಿ
- ಪುಬ್ದ ನಕ್ಷತ್ರ : ಪೂಷಾದೇವತಾರಾಧನೆ : ವಿಜಯ ಪ್ರಾಪ್ತಿಯೇ ಫಲ
- ಉತ್ತರ ಪಾಲ್ಗುಣಿ : ಭಗನೆಂಬ ಸೂರ್ಯನನ್ನು ಪುಷ್ಪಾದಿಗಳಿಂದ ಪೂಜಿಸಿದರೆ ವಿಜಯ ಪ್ರಾಪ್ತಿ. ಕನ್ಯೆಗೆ ಇಷ್ಟವರ ಪ್ರಾಪ್ತಿ.ಪುರುಷನಿಗೆ ಒಳ್ಳೆಯ ಪತ್ನಿ ಲಾಭ. ರೂಪ ಮತ್ತು ದ್ರವ್ಯಾದಿ ಪ್ರಾಪ್ತಿ
- ಹಸ್ತ ನಕ್ಷತ್ರ : ಸೂರ್ಯನನ್ನು ಗಂಧ ಪುಷ್ಪಾಧಿಗಳಿಂದ ಪೂಜಿಸಿದರೆ ಎಲ್ಲ ರೀತಿಯ ಧನ ಪ್ರಾಪ್ತಿ
- ಚಿತ್ತ ನಕ್ಷತ್ರಾ : ತೃಷ್ಟ್ರ ದೇವತೆ ಪೂಜೆ ಮಾಡಿದರೆ ಶತ್ರು ರಹಿತವಾದ ರಾಜ್ಯ ಪ್ರಾಪ್ತಿ
- ಸ್ವಾತಿ ನಕ್ಷತ್ರ : ವಾಯು ದೇವರನ್ನು ಪೂಜಿಸಿದರೆ ಪರಮ ಶಕ್ತಿ ಪ್ರಾಪ್ತಿ
- ವಿಶಾಖ ನಕ್ಷತ್ರ : ಕೆಂಪು ಪುಷ್ಪಗಳಿಂದ ಇಂದ್ರಾಗ್ನಿಗಳನ್ನು ಪೂಜಿಸಿದರೆ ಇಹಲೋಕದಲ್ಲಿ ಧನ ಧಾನ್ಯ ಪ್ರಾಪ್ತಿ ಮತ್ತು ಯಾವಾಗಲೂ ತೇಜಸ್ಸಿನಿಂದ ಕೂಡಿರುವುದು ಫಲ
- ಅನುರಾಧ ನಕ್ಷತ್ರದಲ್ಲಿ ಕೆಂಪು ಹೂಗಳಿಂದ ಮಿತ್ರ ದೇವತೆಯನ್ನು ಭಕ್ತಿಯಿಂದ ಪೂಜಿಸಿದರೆ ಲಕ್ಷ್ಮಿ ಪ್ರಾಪ್ತಿ ಮತ್ತು ಇಹಲೋಕದಲ್ಲಿ ಚೀರ ಜೀವನ
- ಜೇಷ್ಠ ನಕ್ಷತ್ರದಲ್ಲಿ ಇಂದ್ರನ ಪೂಜೆಯಿಂದ ಪುಷ್ಪ ಪ್ರಾಪ್ತಿ ಮತ್ತು ಗುಣಧನ ಮತ್ತು ಕರ್ಮಗಳಲ್ಲಿ ಎಲ್ಲರಿಗಿಂತಲೂ ಶ್ರೇಷ್ಠನಾಗುವಿಕೆ
- ಮೂಲ ನಕ್ಷತ್ರದಲ್ಲಿ ಎಲ್ಲ ದೇವತೆಗಳನ್ನು ಮತ್ತು ಪಿತೃಗಳನ್ನು ಭಕ್ತಿಯಿಂದ ಪೂಜಿಸಿದರೆ ಮಾನವನು ಸ್ವರ್ಗದಲ್ಲಿ ಅಚಲ ನಿವಾಸವನ್ನು ಹೊಂದುತ್ತಾನೆ ಮತ್ತು ಹಿಂದೆ ಹೇಳಿದ ಫಲವನ್ನೇಲ್ಲಾ ಪಡೆಯುತ್ತಾನೆ.
- ಪೂರ್ವಾಷಢ ನಕ್ಷತ್ರದಲ್ಲಿ ಜಲದೇವತೆಯ ಪೂಜೆ ಮತ್ತು ಹೋಮ ಮಾಡಿದರೆ ಶರೀರ ಮತ್ತು ಮನಸ್ಸಿನ ಸಂತಾಪಗಳು ದೂರವಾಗುತ್ತದೆ.
- ಉತ್ತರಾಷಾಢ ನಕ್ಷತ್ರದಲ್ಲಿ ವಿಶ್ವದೇವತೆಗಳು ಮತ್ತು ವಿಶ್ವೇಶ್ವರನ ಪೂಜೆಯನ್ನು ಮಾಡಿದರೆ ಎಲ್ಲ ಅಭೀಷ್ಟೆ ಪ್ರಾಪ್ತಿಯಾಗುವುದು.
- ಶ್ರವಣ ನಕ್ಷತ್ರದಲ್ಲಿ ಬಿಳಿ, ಹಳದಿ, ನೀಲ, ವರ್ಣದ ಹೂಗಳಿಂದ ಭಕ್ತಿಯಿಂದ ವಿಷ್ಣು ಪೂಜೆಯನ್ನು ಮಾಡಿದರೆ ಲಕ್ಷ್ಮಿ ಪ್ರಾಪ್ತಿ ಮತ್ತು ವಿಜಯ ಪ್ರಾಪ್ತಿ
- ಧನಿಷ್ಟ ನಕ್ಷತ್ರ ಗಂಧ ಪುಷ್ಪಾದಿಗಳಿಂದ ವಸ್ತುಗಳ ಪೂಜೆಯನ್ನು ಮಾಡಿದರೆ ಮನುಷ್ಯನು ಮಹಾಭಯವನ್ನು ಕಳೆದುಕೊಳ್ಳುತ್ತಾನೆ.
- ಶತಭಿಷ ನಕ್ಷತ್ರ : ಇಂದ್ರನ ಪೂಜೆಯನ್ನು ಮಾಡಿದರೆ ವ್ಯಾಧಿ ಪರಿಹಾರ ಆ ಮಾನವನಿಗೆ ದೇಹ ಪುಷ್ಪಿ, ಆರೋಗ್ಯ ಮತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ.
- ಪೂರ್ವಾಬಾಧ್ರ ನಕ್ಷತ್ರ : ಶುದ್ದ ಸ್ಪಟಿಕ ಮಣಿಯಂತೆ ಕಾಂತಿಯುಕ್ತನಾದ ಜನ್ಮರಹಿತನಾದ ಪ್ರಭು ಶ್ರೀ ಹರಿಯನ್ನು ಪೂಜಿಸಿದರೆ ವಿಜಯ ಪ್ರಾಪ್ತಿಯಾಗುತ್ತದೆ.
- ಉತ್ತರಾಭಾದ್ರ ನಕ್ಷತ್ರ : ಅರ್ಹಿಬುಧ್ನ್ಯ (ಈಶ್ವರನ) ನಕ್ಷತ್ರದಲ್ಲಿ ಶಿವನ ಪೂಜೆಯಿಂದ ಪರಮಶಾಂತಿ ಪ್ರಾಪ್ತಿಯಾಗುತ್ತದೆ.
- ರೇವತಿ ನಕ್ಷತ್ರ ಬಿಳಿಯ ಹೂವಿನಿಂದ ಪೂಷಾ ದೇವತೆಯನ್ನು ಪೂಜಿಸಿದರೆ ಮಂಗಲ ಪ್ರಾಪ್ತಿ ಅಚವಾದ ಧೈರ್ಯ ಮತ್ತು ವಿಜಯ ಪ್ರಾಪ್ತಿಯಾಗುತ್ತದೆ.
- ತನ್ನ ಸಾಮರ್ಥ್ಯಕ್ಕನುಸಿರಿಸಿ ಈ ಪೂಜೆಯನ್ನಯ ಮಾಡಿದರೆ ಇಷ್ಟ ಫಲಗಳೆಲ್ಲವೂ ಸಿಗುತ್ತವೆ. ಯಾವುದಾದರೊಂದು ಕಾರ್ಯಕ್ಕೆ ಮೊದಲು ನಕ್ಷತ್ರ ದೇವತೆಯ ಪೂಜೆ ಮಾಡುವುದು ಒಳ್ಳೆಯದು ನಮ್ಮ ಕಾರ್ಯವು ಸಫಲವಾಗುತ್ತದೆ.
ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು