- ಕತ್ತಿನಲ್ಲಿ ರೇಖೆಯಿದ್ದು, ಕಣ್ಣುಗಳ ಕೊನೆ ಕೆಂಪಾಗಿದ್ದರೆ ಅವರು ಹೋದ ಮನೆ ಅಭಿವೃದ್ದಿಯಾಗುತ್ತದೆ.
- ಹಣೆಯಲ್ಲಿ ತ್ರಿಶೂಲದ ಗುರುತು ಇದ್ದ ಕನ್ಯೆ ಹಲವು ಸಾವಿರ ದಾಸಿಯರಿಗೆ ಯಜಮಾನಿಯಾಗುತ್ತಾರೆ.
- ರಾಜಹಂಸದಂತಹ ನಡಿಗೆ, ಜಿಂಕೆಯಂತಹ ಕಣ್ಣುಗಳು, ಹಲ್ಲುಗಳು ಸಮಾನ ಮತ್ತು ಬಿಳಿ ಆಗಿದ್ದರೆ ಅವರು ಉತ್ತಮ ಸ್ತ್ರೀ
- ಕಪ್ಪೆಯಂತಹ ಹೊಟ್ಟೆಯಿದ್ದರೆ ಅವರಿಗೆ ಒಬ್ಬನೇ ಪುತ್ರನೇ. ಮತ್ತು ಅವನು ರಾಜನಾಗುತ್ತಾನೆ.
- ಹಂಸದಂತೆ ಮೃಧುವಾದ ಮಾತು, ಜೇನಿನಂತೆ ಪಿಂಗಲವರ್ಣ ಉಳ್ಳವಳು ಧನ, ಧಾನ್ಯ ಸಂಪನ್ನಳೂ, ಎಂಟು ಮಕ್ಕಳು ಉಳ್ಳವಳು ಆಗುತ್ತಾಳೆ.
- ಉದ್ದವಾದ ಕಿವಿ, ಸುಂದರವಾದ ಮೂಗು, ಧನಸ್ಸಿನಂತಹ ಹುಬ್ಬ ಇದ್ದರೆ ತುಂಬಾ ಸುಖಭೋಗವುಳ್ಳವಾಗುತ್ತಾಳೆ.
- ಕೃಶಾಂಗಿ, ಶ್ಯಾಮಲ, ಕೋಮಲೆಯಾಗಿದ್ದರೆ ಮಧುರ ಭಾಷಿಣಿ, ಶಂಖದಂತಹ ಸ್ವಚ್ಛ ಹಲ್ಲುಳ್ಳವಳಿ, ನುಣುಪಾದ ಮೈ ಉಳ್ಳವಳು ತುಂಬಾ ಐಶ್ವರ್ಯವಂತಳಾಗುತ್ತಾಳೆ.
- ವೀಸ್ತ್ರೀಣವಾದ ಮಧ್ಯಭಾಗ ಉಳ್ಳವಳು ವಿಶಾಲವಾದ ಕಣ್ಣುಳ್ಳವಳು ರಾಣಿಯಾಗುತ್ತಾಳೆ.
- ಸ್ತ್ರೀ ಎಡಸ್ತನದಲ್ಲಿ, ಕೈ ಯಲ್ಲಿ, ಕಿವಿಯ ಮೇಲೆ ಕತ್ತಿನಲ್ಲಿ ಎಳ್ಳಿನ ಗುರುತು (ಮಚ್ಚೆ) ಇರುತ್ತದೆಯೋ ಅವಳಿಗೆ ಮೊದಲು ಗಂಡು ಶಿಶು ಹುಟ್ಟುತ್ತದೆ.
- ಕಾಲು, ಕೆಂಪು ಚಿಕ್ಕದಾದ ಕಾಲುಗಂಟು ಹತ್ತಿರ ಹತ್ತಿರವಾದ ಬೆರಳುಗಳು ಕೆಂಪಾದ ಅಂಚಿನ ಕಣ್ಣು ಇದ್ದರೆ ಅವಳು ಸುಖವಂತಳಾಗುತ್ತಾಳೆ.
- ಎಲ್ಲ ಅಂಗಗಳೂ ದೊಡ್ಡದಾಗಿದ್ದು, ಮೈ ಯೆಲ್ಲಾ ರೋಮವಿದ್ದರೆ ಚಿಕ್ಕ ಕೈ ಗಳಿದ್ದರೆ ಅವಳು ದಾಸಿಯಾಗುತ್ತಾಳೆ.
- ಕಾಲುಗಳು ದೊಡ್ಡದಾಗಿದ್ದು, ಮುಖ ವಿಕಾರವಾಗಿದ್ದು, ಮೇಲಿನ ತುಟಿಯಲ್ಲಿ ರೋಮವಿದ್ದರೆ ಅವಳು ತನ್ನ ಗಂಡನನ್ನು ಸಾಯಿಸುತ್ತಾಳೆ.
- ಪವಿತ್ರಳಾಗಿದ್ದು, ದೇವಾತ ಗುರು ಬ್ರಾಹ್ಮಣರಲ್ಲಿ ಭಕ್ತಿ ಉಳ್ಳವರಾಗಿದ್ದರೆ ಅವಳು ಮಾನುಷ ಸ್ತ್ರೀ ಸ್ನಾನ ಮಾಡಿ ಸುಗಂಧ ದ್ರವ್ಯವನ್ನು ಲೇಪಿಸಿ ಮಧುರ ಸಂಭಾಷಣೆಯಾಗಿದ್ದು, ಸ್ವಲ್ಪವೇ ಆಹಾರ, ಅಲ್ಪ ನಿದ್ರೆ ಯಾವಾಗಲೂ ಶುದ್ದವಾಗಿರುವ ಸ್ತ್ರೀ ಮಾರ್ಚಾರೀ (ಬೆಕ್ಕು) ಸ್ತ್ರೀ ಎನ್ನಿಸಿಕೊಳ್ಳುತ್ತಾಳೆ.
- ಕೆಲವು ಸಲ ನಗುವುದು, ಆಗಾಗ ಆಟವಾಡುವುದು, ಪ್ರಸನ್ನತೆ ಮತ್ತು ಸಿಟ್ಟು ಮಾಡುವುದು, ಗಂಡಸರ ಮಧ್ಯದಲ್ಲಿಯೇ ಓಡಾಡುವ ಸ್ತ್ರೀಯೂ ಗರ್ದಭೂ (ಕತ್ತೆ) ಎಂದು ಹೇಳಿಸಿಕೊಳ್ಳುತ್ತಾಳೆ.
- ಗಂಡ ಮತ್ತು ಬಂಧುಗಳು ಹೇಳಿದ ಹಿತವಚನವನ್ನು ಪಾಲಿಸದೆ ಇರುವ ಸ್ತ್ರೀಯು ಅಸುರೀ. ಅತಿಯಾದ ಊಟ, ಬಹಳವಾದ ಮಾತು ಪೊಳ್ಳಾದ ಮಾತುಗಳು ಗಂಡನನ್ನು ಕೊಲ್ಲಲು ಹವಣಿಸುವಳು.
- ಪಿಶಾಚಿ ತುಂಬಾ ಚಂಚಲ ಸ್ವಭಾವ ಚಂಚಲ ಕಣ್ಣು ಅತ್ತ ನೋಡುತ್ತಿರುವುದು. ಲೋಭ ಸ್ವಭಾವದ ಹೆಂಗಸು ವಾನರಿ ಎನಿಸುತ್ತಾಳೆ.
- ಚಂದ್ರಮುಖಿ ಮಧು ಗಜಗಮನೆ, ಕೆಂಪಾದ ಉಗುರುಗಳು, ಕೈ, ಕಾಲುಗಳಲ್ಲಿ ಶುಭ ಲಕ್ಷ್ಮಣವಿದ್ದರೆ ಅವಳು ವಿದ್ಯಾಧರಿ, ವೀಣೆ ಮೃಧುಂಗ, ಕೊಳಲು ಮುಂತಾದವುಗಳ ಧ್ವನಿಯನ್ನು ಕೇಳುತ್ತಾ ಹೂವು ಸುಗಂಧ ದ್ರವ್ಯಗಳನ್ನು ಅಭಿರುಚಿಯುಳ್ಳ ಸ್ತ್ರೀಯೂ ಗಾಂಧರ್ವೀ ಎಂದು ಹೇಳಲ್ಪಡುತ್ತಾಳೆ.
- ಸುವಂತು ಮುನಿಯು ಶಾತನೀಕ ರಾಜನಿಗೆ ಈ ರೀತಿ ಸ್ತ್ರೀ ಪುರುಷ ಲಕ್ಷಣಗಳನ್ನು ಹೇಳಿದ್ದಾರೆ. ಇದನ್ನೆಲ್ಲಾ ಮೂಲತಃ ಬ್ರಹ್ಮದೇವರು ಹೇಳಿದ್ದಾರೆ.
ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು.