- ಹಾಗಲಬಳ್ಳಿಯ ಎಲೆಯ ಕಷಾಯಕ್ಕೆ ಸ್ವಲ್ಪ ಅರಶಿಣ ಸೇರಿಸಿ ಕುಡಿಯುವುದರಿಂದ ಪದೆ ಪದೇ ತೇಗು ಬರುವುದು ಕಡಿಮೆಯಾಗುತ್ತದೆ. ಮತ್ತು ವಾಯು ಭಾದೆಯಿದ್ದರೂ ಗುಣವಾಗುತ್ತದೆ.
- ಹಾಗಲ ಬಳ್ಳಿಯ ಎಲೆ ಒಂದು ತೊಲ, ಮೆಣಸಿನ ಕಾಳು 10 ರಿಂದ 12 ಬೆಳ್ಳುಳ್ಳಿ ಹಿಲಕು 7 ಸ್ವಲ್ಪ ಎಳ್ಳೆಣ್ಣೆ ಇವುಗಳನ್ನು ಕಲಿಸಿ ಅರೆದು ಮುಟ್ಟಾಗಿರುವಾಗ ಮೂರು ದಿವಸ ಬೆಳಗ್ಗೆ ಒಂದು ಹೊತ್ತು ಕುಡಿಸಿ ಹಾಲು ಅನ್ನ ಪತ್ತ್ಯವಿಡಬೇಕು.
- ಇದರಿಂದ ಬಂಜೆಯವರಿಗೆ ಮತ್ತು ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ.
- ಹಾಗಲ ಹೂವಿನ ರಸವನ್ನು ಕಿವಿಗೆ ಹಾಕುವುದರಿಂದ ಕಿವಿಯಿಂದ ಸೊರುವ ಕೀವು ನಿಲ್ಲುತ್ತದೆ.
- ಹಾವು ಕಡಿದ ಕೂಡಲೇ ಹಾಗಲ ಎಲೆಯ ರಸವನ್ನು ಕುಡಿಸಿದರೆ ವಾಂತಿಯಾಗಿ ವಿಷವು ಇಳಿಯುತ್ತದೆ.
- ಹಾಗಲಕಾಯಿ ಅಥವಾ ಎಲೆಯ ರಸವನ್ನು ಸುಮಾರು 2 ತೊಲದಷ್ಟು ಮಾಡಿಕೊಂಡು ಒಂದು ತೊಲ ಕಲ್ಲು ಸಕ್ಕರೆ ಸೇರಿಸಿ ಪ್ರಾತಃ ಕಾಲ ಕುಡಿಯಬೇಕು. ಇದೇ ರೀತಿ 7 ದಿವಸ ಕುಡಿಯಲು ರಕ್ತಮೂಲವು ವಾಸಿಯಾಗುತ್ತದೆ.
- ಹಾಗಲಕಾಯಿ ಅಥವಾ ಎಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪ ಕೂಡಿಸಿ ಕುಡಿಯುವುದರಿಂದ ಯಕೃತ್ತಿನ (ಲೀವರ್) ವಿಕಾರಗಳು ಶಾಂತವಾಗುತ್ತದೆ.
- ಹಾಗಲ ಎಲೆಯ ರಸಕ್ಕೆ ಸ್ವಲ್ಪ ಮೊಸರು ಕೂಡಿಸಿ ಶರೀರಕ್ಕೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡುವುದರಿಂದ ಮೈ ಮೇಲೆದ್ದಿರುವ ಪಿತ್ತದ ಗಂಧೆಗಳು ವಾಸಿಯಾಗುತ್ತದೆ.
- ಹಾಗಲ ಹೂ 9, ನುಗ್ಗೆ ಹೂ 9, ಮತ್ತು ಕಾಳು ಮೆಣಸು 9 ಇವುಗಳನ್ನು ಬಿಸಿ ನೀರಿನಲ್ಲಿ ಅರೆದು ಕುಡಿಸುವುದರಿಂದ ಚಳಿಜ್ವರ ಮತ್ತು ವಾತಜ್ವರ ವಾಸಿಯಾಗುತ್ತದೆ.
- ಹಾಗಲ ಸೊಪ್ಪಿನ ರಸ ಒಂದು ಪಾವು ಮತ್ತು ಅಷ್ಟೇ ಪ್ರಮಾಣ ತೆಂಗಿನ ಹಾಲು ಸೇರಿಸಿ ಕುದಿಸಿ ಸೇವಿಸಿದರೆ ಭೇದಿಯಾಗಿ ಜಂತು ಹುಳುಗಳು ಹೊರ ಬರುತ್ತವೆ. ವಾರದಲ್ಲಿ ಅಥವಾ ಹದಿನೈದು ದಿನಕ್ಕೊಮ್ಮೆ ಈ ಚಿಕಿತ್ಸೆ ಮಾಡಬೇಕು.
- ಹಾಗಲ ಬಳ್ಳಿಯ ಎಲೆಗಳನ್ನು ಅರೆದು ಅಂಗಾಲಿಗೆ ಹಚ್ಚುವುದರಿಂದ ಅಂಗಾಲು ಉರಿ ಕಡಿಮೆಯಾಗುತ್ತದೆ.
- ಹಾಗಲ ಸೊಪ್ಪನ್ನು ಅರೆದು ಎದೆಗೆ ಪಟ್ಟು ಹಾಕುವುದರಿಂದ ತಾಯಂದಿರಲ್ಲಿ ಎದೆಹಾಲು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ.
- ದಿವಸಕೊಮ್ಮೆ ತುಲಾ 5 ಗ್ರಾಂ ನಷ್ಟು ಹಾಗಲ ಎಲೆ, ಬೇವಿನ ಎಲೆ, ಕರಿಬೇವಿನ ಎಲೆ, ತುಳಸಿ ಎಲೆ, ಇವುಗಳ ಸೇವನೆಯಿಂದ ಮಧುಮೇಹ ವ್ಯಾಧಿಯ ಹತೋಟಿಗೆ ಬರುತ್ತದೆ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು