ಹಾಗಲಬಳ್ಳಿಯ ಎಲೆಯ ಕಷಾಯಕ್ಕೆ ಸ್ವಲ್ಪ ಅರಶಿಣ ಸೇರಿಸಿ ಕುಡಿಯುವುದರಿಂದ ಪದೆ ಪದೇ ತೇಗು ಬರುವುದು ಕಡಿಮೆಯಾಗುತ್ತದೆ. ಮತ್ತು ವಾಯು ಭಾದೆಯಿದ್ದರೂ ಗುಣವಾಗುತ್ತದೆ. ಹಾಗಲ ಬಳ್ಳಿಯ ಎಲೆ ಒಂದು ತೊಲ, ಮೆಣಸಿನ ಕಾಳು 10 ರಿಂದ 12 ಬೆಳ್ಳುಳ್ಳಿ ಹಿಲಕು 7 ಸ್ವಲ್ಪ ಎಳ್ಳೆಣ್ಣೆ ಇವುಗಳನ್ನು ಕಲಿಸಿ ಅರೆದು ಮುಟ್ಟಾಗಿರುವಾಗ ಮೂರು ದಿವಸ ಬೆಳಗ್ಗೆ ಒಂದು ಹೊತ್ತು ಕುಡಿಸಿ ಹಾಲು ಅನ್ನ ಪತ್ತ್ಯವಿಡಬೇಕು. ಇದರಿಂದ ಬಂಜೆಯವರಿಗೆ ಮತ್ತು ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ. ಹಾಗಲ ಹೂವಿನ ರಸವನ್ನು ಕಿವಿಗೆ ಹಾಕುವುದರಿಂದ ಕಿವಿಯಿಂದ […]
Tag: ayurveda
ಪಿತ್ತ ಪ್ರಕೋಪಕ್ಕೆ ಮನೆ ಮದ್ದು
ಒಂದು ಚಮಚ ತುಳಸಿ ರಸ, ಒಂದು ಚಮಚ ಹಸಿ ಶುಂಠಿ ರಸ, ಎರಡು ಚಮಚ ಲಿಂಬೆ ರಸ ಸೇರಿಸಿ ಕುಡಿಯಬೇಕು. ಪಿತ್ತಪ್ರಕೋಪದ ಕಾರಣ ಶರೀರದಲ್ಲಿ ಪಿತ್ತದ ಗ್ರಂಥಿಗಳು ಎದ್ದಿದ್ದರೆ 10 ಗ್ರಾಮ ತುಳಸಿಯ ಬೀಜವನ್ನು ತುಳಸಿಯ ರಸದಲ್ಲಿ ಬೆರೆಸಿ ಸೇವಿಸುವುದು. ಎರಡು ಚಮಚ ಜೇನುತುಪ್ಪದಲ್ಲಿ ಎರಡು ಚಿಟಿಕೆ ಅಳಲೆಕಾಯಿ ಚೂರ್ಣವನ್ನು ಸೇರಿಸಿ ಸೇವಿಸುವುದು. ಒಂದು ಕಪ್ ಪಪ್ಪಾಯಿ ಹಣ್ಣಿನ ರಸದಲ್ಲಿ ಮೂಲಂಗಿಯ ರಸ ಸೇರಿಸಿ ಬೆಳಗ್ಗೆ ಹಾಗೂ ಸಾಯಂಕಾಲ ಸೇವಿಸುತ್ತಿದ್ದರೆ ಹುಳಿ ತೇಗು ನಿಲ್ಲುತ್ತದೆ. ಮತ್ತು ಪಿತ್ತ […]