- ಜನ್ಮ ಕುಂಡಲಿಯ ಎಂಟನೇ ಮನೆಯಲ್ಲಿ ಶನಿಯಿದ್ದರೆ ಭೋಜನ, ಧನ, ವಸ್ತ್ರ, ಹಸು ಮುಂತಾದವುಗಳು ದಾನ ಮಾಡಬಾರದು.
- ಜನ್ಮ ಕುಂಡಲಿಯ ಐದನೇಯ ಮನೆಯಲ್ಲಿ ಗುರುವಿದ್ದರೆ ಹಣದ ದಾನ ಮಾಡಬಾರದು.
- ಜನ್ಮ ಕುಂಡಲಿಯ ಒಂಬತ್ತನೇಯ ಮನೆಯಲ್ಲಿ ಗುರುವಿದ್ದರೆ ದೇವಸ್ಥಾನ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ಕಾಗಿ ದಾನ ಮಾಡಬಾರದು.
- ಜನ್ಮ ಕುಂಡಲಿಯ ಹನ್ನರಡನೇಯ ಮನೆಯಲ್ಲಿ ಚಂದ್ರನಿದ್ದರೆ ಪುರೋಹಿತರಿಂದ ಯಾವುದೇ ರೀತಿಯ ಧಾರ್ಮಿಕ ಕಾರ್ಯವನ್ನು ಮಾಡಿಸಬಾರದು. ಮತ್ತು ದಾನ ಕೂಡ ಮಾಡಕೂಡದು.
- ಜನ್ಮ ಕುಂಡಲಿಯ ಏಳನೇಯ ಮನೆಯಲ್ಲಿ ಗುರುವಿದ್ದರೆ ಪುರೋಹಿತರಿಗೆ ಧನ ಧಾನ್ಯ ದಾನ ಮಾಡಕೂಡದು.
- ಜನ್ಮ ಕುಂಡಲಿಯ ಆರನೇಯ ಮನೆಯಲ್ಲಿ ಶನಿಯಿದ್ದರೆ ನಿಕಟ ಸಂಬಂಧಿಯ ವಿವಾಹದಲ್ಲಿ ಸೇರಬೇಡಿ ಅಥವಾ ಅವರ ವಿವಾಹಕ್ಕೆ ಆರ್ಥಿಕ ಸಹಾಯ ಮಾಡಬೇಡಿ.
- ಜನ್ಮ ಕುಂಡಲಿಯ ನಾಲ್ಕನೇಯ ಮನೆಯಲ್ಲಿ ಶುಕ್ರ ಮತ್ತು ರಾಹು ಜೊತೆಯಲ್ಲಿದ್ದರೆ ಮಗಳ ಮದುವೆ (ಸಮಯದಲ್ಲಿ) ಬ್ರಾಹ್ಮಣರಿಗೆ ದಾನ ಮಾಡಬೇಡಿ.
- ಜನ್ಮ ಕುಂಡಲಿಯ ಏಳನೇ ಮನೆಯಲ್ಲಿ ಕೇತುವಿದ್ದರೆ ಲೋಹ, ಲೋಹದ ವಸ್ತುಗಳನ್ನು ದಾನ ಮಾಡಬೇಡಿ.
- ಜನ್ಮ ಕುಂಡಲಿಯಲ್ಲಿ ಯಾವ ಗ್ರಹ ತನ್ನ ಸ್ವಕ್ಷೇತ್ರದಲ್ಲಿಯೋ ಮತ್ತು ಉಚ್ಚನಾಗಿರುವನೋ ಆಗ್ರಹದ ಕಾರಕ ವಸ್ತುಗಳನ್ನು ದಾನ ಮಾಡಬಾರದು.
- ಇದೇ ಪ್ರಕಾರ ಜನ್ಮ ಕುಂಡಲಿಯಲ್ಲಿ ಯಾವ ಗ್ರಹ ಅಶುಭವಾಗಿದೆಯೋ ಅಥವಾ ನೀಚವಾಣಿಯೋ ಇದ್ದರೆ ಆ ಗ್ರಹದ ವಸ್ತುಗಳನ್ನುಜಾತಕನೂ ದಾನವಾಗಿ ಅಥವಾ ಉಚಿತವಾಗಿ ಯಾರಿಂದಲೂ ತೆಗೆದುಕೊಳ್ಳಬಾರದು.
- ದಾನ ಮಾಡುವುದರಿಂದ ಪುಣ್ಯ ಪ್ರಾಪ್ತ ಮಾಡಿಕೊಳ್ಳುವ ಬದಲು ಘೋರ ಕಷ್ಟಗಳನ್ನು ಎದುರಿಸಬೇಕಾಗಬಹುದು.
ಮಾಹಿತಿ: ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು,