ಆಧ್ಯಾತ್ಮ

ಯಾರು ? ಯಾವ ದಾನವನ್ನು ಮಾಡಬಾರದು ಗೊತ್ತಾ ?

  • ಜನ್ಮ ಕುಂಡಲಿಯ ಎಂಟನೇ ಮನೆಯಲ್ಲಿ ಶನಿಯಿದ್ದರೆ ಭೋಜನ, ಧನ, ವಸ್ತ್ರ, ಹಸು ಮುಂತಾದವುಗಳು ದಾನ ಮಾಡಬಾರದು.
  • ಜನ್ಮ ಕುಂಡಲಿಯ ಐದನೇಯ ಮನೆಯಲ್ಲಿ ಗುರುವಿದ್ದರೆ ಹಣದ ದಾನ ಮಾಡಬಾರದು.
  • ಜನ್ಮ ಕುಂಡಲಿಯ ಒಂಬತ್ತನೇಯ ಮನೆಯಲ್ಲಿ ಗುರುವಿದ್ದರೆ ದೇವಸ್ಥಾನ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ಕಾಗಿ ದಾನ ಮಾಡಬಾರದು.
  • ಜನ್ಮ ಕುಂಡಲಿಯ ಹನ್ನರಡನೇಯ ಮನೆಯಲ್ಲಿ ಚಂದ್ರನಿದ್ದರೆ ಪುರೋಹಿತರಿಂದ ಯಾವುದೇ ರೀತಿಯ ಧಾರ್ಮಿಕ ಕಾರ್ಯವನ್ನು ಮಾಡಿಸಬಾರದು. ಮತ್ತು ದಾನ ಕೂಡ ಮಾಡಕೂಡದು.
  • ಜನ್ಮ ಕುಂಡಲಿಯ ಏಳನೇಯ ಮನೆಯಲ್ಲಿ ಗುರುವಿದ್ದರೆ ಪುರೋಹಿತರಿಗೆ ಧನ ಧಾನ್ಯ ದಾನ ಮಾಡಕೂಡದು.
  • ಜನ್ಮ ಕುಂಡಲಿಯ ಆರನೇಯ ಮನೆಯಲ್ಲಿ ಶನಿಯಿದ್ದರೆ ನಿಕಟ ಸಂಬಂಧಿಯ ವಿವಾಹದಲ್ಲಿ ಸೇರಬೇಡಿ ಅಥವಾ ಅವರ ವಿವಾಹಕ್ಕೆ ಆರ್ಥಿಕ ಸಹಾಯ ಮಾಡಬೇಡಿ.
  • ಜನ್ಮ ಕುಂಡಲಿಯ ನಾಲ್ಕನೇಯ ಮನೆಯಲ್ಲಿ ಶುಕ್ರ ಮತ್ತು ರಾಹು ಜೊತೆಯಲ್ಲಿದ್ದರೆ ಮಗಳ ಮದುವೆ (ಸಮಯದಲ್ಲಿ) ಬ್ರಾಹ್ಮಣರಿಗೆ ದಾನ ಮಾಡಬೇಡಿ.
  • ಜನ್ಮ ಕುಂಡಲಿಯ ಏಳನೇ ಮನೆಯಲ್ಲಿ ಕೇತುವಿದ್ದರೆ ಲೋಹ, ಲೋಹದ ವಸ್ತುಗಳನ್ನು ದಾನ ಮಾಡಬೇಡಿ.
  • ಜನ್ಮ ಕುಂಡಲಿಯಲ್ಲಿ ಯಾವ ಗ್ರಹ ತನ್ನ ಸ್ವಕ್ಷೇತ್ರದಲ್ಲಿಯೋ ಮತ್ತು ಉಚ್ಚನಾಗಿರುವನೋ ಆಗ್ರಹದ ಕಾರಕ ವಸ್ತುಗಳನ್ನು ದಾನ ಮಾಡಬಾರದು.
  • ಇದೇ ಪ್ರಕಾರ ಜನ್ಮ ಕುಂಡಲಿಯಲ್ಲಿ ಯಾವ ಗ್ರಹ ಅಶುಭವಾಗಿದೆಯೋ ಅಥವಾ ನೀಚವಾಣಿಯೋ ಇದ್ದರೆ ಆ ಗ್ರಹದ ವಸ್ತುಗಳನ್ನುಜಾತಕನೂ ದಾನವಾಗಿ ಅಥವಾ ಉಚಿತವಾಗಿ ಯಾರಿಂದಲೂ ತೆಗೆದುಕೊಳ್ಳಬಾರದು.
  • ದಾನ ಮಾಡುವುದರಿಂದ ಪುಣ್ಯ ಪ್ರಾಪ್ತ ಮಾಡಿಕೊಳ್ಳುವ ಬದಲು ಘೋರ ಕಷ್ಟಗಳನ್ನು ಎದುರಿಸಬೇಕಾಗಬಹುದು.

ಮಾಹಿತಿ: ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು,

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *