- ಜನ್ಮ ಕುಂಡಲಿಯಲ್ಲಿ ಸೂರ್ಯನು 7ನೇ ಮನೆಯಲ್ಲಿದ್ದರೆ ಜಾತಕನು ಬೆಳಗ್ಗೆ ಸಂಜೆ ದಾನ ಮಾಡಿದರೆ ಆ ದಾನವು ಕಾರ್ಕೋಟಕ ವಿಷದ ಸಮಾನ ಪರಿಣಾಮ ಉಂಟು ಮಾಡುತ್ತದೆ.
- ಜನ್ಮ ಕುಂಡಲಿಯಲ್ಲಿ ಚಂದ್ರನು 6ನೇ ಮನೆಯಲ್ಲಿದ್ದರೆ ಅಂತಹ ಜಾತಕನು ಹಾಲು ಅಥವಾ ನೀರಿನ ದಾನ ಮಾಡಬಾರದು. ಮತ್ತು ಬಾವಿ ಕೊಳೆ ನೀರಿನ ಅರವಟಿಗೆಯನ್ನು ಜನರ ಉಪಯೋಗಕ್ಕೆಂದು ಕಟ್ಟಬಾರದು. ಅಥವಾ ಅದರ ದುರಸ್ತಿ ಮಾಡಿಸಬಾರದು. ಹಾಗೆ ಮಾಡಿಸಿದಲ್ಲಿ ಕಾಲ ಕ್ರಮೇಣ ಅವನ ವಂಶ ನಿರ್ವಂಶವಾಗುವುದು. ಅವನ ತಲೆಯ ಮೇಲೆ ಮೃತ್ಯು ದೃಷ್ಟಿಸಿಕೊಂಡಿರುವುದು.
- ಜನ್ಮ ಕುಂಡಲಿಯ 12ನೇ ಮನೆಯಲ್ಲಿ ಚಂದ್ರನಿದ್ದರೆ ಅಂತಹ ಜಾತಕನು ಉಚಿತ ಪಾಠ ಶಾಲೆ ತೆರೆಯಬಾರದು. ಯಾರಿಗೂ ಉಚಿತವಾಗಿ ಶಿಕ್ಷಣವನ್ನು ಕೊಡಿಸಬಾರದು. ಅಥವಾ ಸಾಧು ಸಂತರಿಗೆ ಪ್ರತಿ ದಿನ ಆಹಾರ ಕೊಟ್ಟರೆ ಅಥವಾ ಹಾಲು ಕುಡಿಸಿದರೆ ಅವನಿಗೆ ಎಂತಹ ರ್ದುಗತಿ ಬರುವುದೆಂದು ಕೊನೆಯ ಕ್ಷಣದಲ್ಲಿ ನೀರು ಕೊಡುವವರೂ ಗತಿಯಿರುವುದಿಲ್ಲ.
- ಜನ್ಮ ಕುಂಡಲಿಯಲ್ಲಿ ಎಳನೇ ಮನೆಯಲ್ಲಿ ಗುರುವಿದ್ದರೆ ಅಂತಹ ಜಾತಕನು ಯಾರಿಗಾದರೂ ವಸ್ತ್ರದಾನ ಮಾಡಿದರೆ ಕಾಲಕ್ರಮೇಣ ಸ್ವತಃ ವಿವಸ್ತ್ರನಾಗುತ್ತಾನೆ.
- ಜನ್ಮ ಕುಂಡಲಿಯಲ್ಲಿ ಗುರುವು ಹತ್ತರಲ್ಲಿಯೂ ಮತ್ತು ಚಂದ್ರ ನಾಲ್ಕರಲ್ಲಿಯೂ ಇದ್ದರೆ ಅಂತಹ ಜಾತಕನು ಪೂಜಾ ಸ್ಥಳ ಅಥವಾ ದೇವಸ್ಥಾನ ಕಟ್ಟಿಸಿದರೆ ಸುಳ್ಳು ಆರೋಪದಿಂದ ಅವನಿಗೆ ಗಲ್ಲು ಶಿಕ್ಷೆಯಾಗುತ್ತದೆ.
- ಜನ್ಮ ಕುಂಡಲಿಯಲ್ಲಿ ಒಂಬತ್ತನೇಯ ಮನೆಯಲ್ಲಿ ಶುಕ್ರನಿದ್ದರೆ ಅಂತಹ ಜಾತಕನು ಅವರನ್ನು ತಮ್ಮ ಬಳಿ ಇಟ್ಟುಕೊಂಡರೆ ಜಾತಕನಿಗೆ ಅಧಿಕ ಹಾನಿಯುಂಟಾಗುತ್ತದೆ.
- ಜನ್ಮ ಕುಂಡಲಿಯ ಎಂಟನೆಯ ಮನೆಯಲ್ಲಿ ಶನಿಯಿದ್ದರೆ ಅಂತಹ ಜಾತಕನು ಧರ್ಮ ಛತ್ರ ನಿವಾಸ ಕಟ್ಟಿದ್ದರೆ ಸ್ವಯಂ ಮನೆಯಲ್ಲಿದನಾಗುತ್ತಾನೆ ಮತ್ತು ನಿರ್ಧನನಾಗುತ್ತಾನೆ.
ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು,