- ಹುರುಳಿಯ ಕಷಾಯ ಅಥವಾ ಸಾರು ಮಾಡಿ ಸೇವಿಸುವುದು.
- ಕಿಸ್ಗಾರದ ಬೇರಿನ ಹಾಲು ಕಷಾಯ ಸೇವಿಸುವುದು 7 ದಿನ
- ನೆಲ್ಲಿಸೋಪ್ಪಿನ ರಸಕ್ಕೆ ಎಳ್ಳೆಣ್ಣೆ ಹಾಕಿ ಸೇವಿಸುವುದು ಒಂದು ವಾರ
- ರಾಗಿ ಹುಡಿಯನ್ನು ಜೇನಿನಲ್ಲಿ ಕಲಿಸಿ ಅರ್ಧ ಲೀಟರ್ ಎಮ್ಮೆಯ ಹಾಲಿನಲ್ಲಿ ಕದಡಿ ಸೇವಿಸುವುದು ಎಳು ದಿನ
- ಮೂತ್ರನಾಳಗಳಲ್ಲಿ ಕಲ್ಲು ಸೇರಿಕೊಂಡಿದ್ದರೆ ಅನಾನಸ್ ಹಣ್ಣಿನ ರಸವನ್ನು ಆಗಾಗ ಸೇವಿಸಿರಿ ಅಥವಾ ನಿರಂತರವಾಗಿ ಉಪಯೋಗಿಸಿರಿ ಕಲ್ಲು ಕರಗಿ ಹೋಗುತ್ತದೆ.
- ಇದು ಮಾತ್ರವಲ್ಲದೆ ಮೂತ್ರ ತೊಂದರೆಗಳನ್ನು ಸಹ ಅನಾನಸ್ ಹಣ್ಣು ಕಡಿಮೆ ಮಾಡುತ್ತದೆ.
- ಬೇಕಾದಷ್ಟು ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯಾಗದಿರುವುದರಿಂದ ಮೂತ್ರ ಕೋಶದಲ್ಲಿ ಕಲ್ಲು ಕಟ್ಟುವುದು ಹಾಗೂ ಜೈವಿಕ ದ್ರವ್ಯ ಪರಿಣಾಮದಲ್ಲಿ ವ್ಯತ್ಯಾಸ ತಲೆದೋರಿ ಮೂತ್ರದಲ್ಲಿ ರಕ್ತಮ್ಲತೆ ಮುಂತಾದವು ತಲೆದೋರುವುದು.
- ಕಾರಣ ಟೋಮೋಟೋ, ಕಲ್ಲಂಗಡಿ ಮುಂತಾದ ಪೋಟಾಸಿಯಂ ಹೆಚ್ಚಾಗಿರುವ ಹಣ್ಣುಗಳನ್ನು ಮೂತ್ರಕೋಶದ ತೊಂದರೆಯಿರುವ ಸೇವಿಸುವುದು ಉತ್ತಮ.
- ಪ್ರತಿದಿನ ಗಜ್ಜರಿ ತಿನ್ನುವುದು ಮೂತ್ರ ಕೋಶದಲ್ಲಿ ಕಲ್ಲು ಕಟ್ಟುವವರಿಗೆ ಒಂದು ನೈಸರ್ಗಿಕ ಪ್ರತಿರೋಧದ ಜೌಷಧವಿದ್ದಂತೆ ಸರಿ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು