ಉಡುಪಿ prajakiran.com : ಕೊಡೆರಿ ಸಮುದ್ರದಲ್ಲಿ ನಾಡ ದೋಣಿಯೊಂದು ಬಂಡೆಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ 10 ಮೀನುಗಾರರ ಪೈಕಿ ಮೂವರು ನಾಪತ್ತೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಿರಿ ಮಂಜೇಶ್ವರ ಸಮೀಪ ಘಟನೆ ಸಂಭವಿಸಿದೆ. ಇದು ಕರಾವಳಿಯ ಮೀನುಗಾರರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿರುವ ಕರಾವಳಿ ಕಾವಲು ಪೊಲೀಸ್ ಠಾಣೆ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಾಗರ ಶ್ರೀ ಹೆಸರಿನ ದೋಣಿಯೇ ಬಂಡೆಗೆ ಡಿಕ್ಕಿ ಹೊಡೆದಿದೆ. ನಾಪತ್ತೆಯಾದ ಮೂರು ಮೀನುಗಾರರಿಗೆ ಶೋಧ ಕಾರ್ಯ ಆರಂಭಗೊಂಡಿದೆ.