ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ದಿಂದ ಧಾರವಾಡದ ಹೊಸ ಯಲ್ಲಾಪುರ ತುಂಬಾ ಗಬ್ಬು ವಾಸನೆ ಹಬ್ಬುತ್ತಿದೆ.
ಧಾರವಾಡದ ಜನನೀಬಿಡ ರಸ್ತೆ ಹಾಗೂ ನಗರದ ಒಳಗೆ ಕಸ ವಿಲೇವಾರಿ ಘಟಕ ಇರುವ ಹಿನ್ನೆಲೆಯಲ್ಲಿ ನಗರವಾಸಿಗಳು ನರಕ ಯಾತನೆ ಅನುಭವಿಸುವಂತೆ ಆಗಿದೆ.
ಅದರಲ್ಲೂ ಎಲ್ಲಿ ಬೇಕೆಂದರಲ್ಲಿ ಗುಂಪು ಗುಂಪಾಗಿ ಕಸ ಹಾಕಿದ್ದರಿಂದ ಧಾರವಾಡದ ಹೊಸಯಲ್ಲಾಪುರ, ಲಕ್ಷ್ಮಿ ನಗರ, ಜನ್ನತ್ ನಗರ, ದಾನೇಶ್ವರನಗರ, ಗಾಂಧಿನಗರ, ಸೇರಿದಂತೆ ವಿವಿಧ ಕಡೆಗಳಲ್ಲಿ ಗಬ್ಬುನಾತ ಹರಡುತ್ತಿದೆ.
ಇದರಿಂದಾಗಿ ಬೇಸತ್ತು ಹೋಗಿರುವ ಜನತೆ ಈ ಹಿಂದೆ ಹುಬ್ಬಳ್ಳಿ ಧಾರವಾಡ
ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಆಗ ಶಾಸಕರು ಶೀಘ್ರವಾಗಿ ಸಮಸ್ಯೆ ಬಗೆಹರಿಯಲಿದೆ. ತ್ಯಾಜ್ಯ ನಿರ್ವಹಣೆ ಘಟಕ ಆರಂಭಿಕ ಹಂತದಲ್ಲಿ ಇದೆ ಎಂದು ಭರವಸೆ ನೀಡಿದ್ದರು.
ಆದರೆ ಈವರೆಗೆ ಅವರ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ನಾವು ದಿನನಿತ್ಯ ನಮ್ಮ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆಎಂದು ಲಕ್ಷ್ಮಿ ನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.