ಜಿಲ್ಲೆ

ಧಾರವಾಡದ ಹೊಸ ಯಲ್ಲಾಪುರ ತುಂಬಾ ಹಬ್ಬುತ್ತಿರುವ ಗಬ್ಬು ವಾಸನೆ….!

ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ದಿಂದ ಧಾರವಾಡದ ಹೊಸ ಯಲ್ಲಾಪುರ ತುಂಬಾ ಗಬ್ಬು ವಾಸನೆ ಹಬ್ಬುತ್ತಿದೆ.

ಧಾರವಾಡದ ಜನನೀಬಿಡ ರಸ್ತೆ ಹಾಗೂ ನಗರದ ಒಳಗೆ ಕಸ ವಿಲೇವಾರಿ ಘಟಕ ಇರುವ ಹಿನ್ನೆಲೆಯಲ್ಲಿ ನಗರವಾಸಿಗಳು ನರಕ ಯಾತನೆ ಅನುಭವಿಸುವಂತೆ ಆಗಿದೆ.

ಅದರಲ್ಲೂ ಎಲ್ಲಿ ಬೇಕೆಂದರಲ್ಲಿ ಗುಂಪು ಗುಂಪಾಗಿ ಕಸ ಹಾಕಿದ್ದರಿಂದ ಧಾರವಾಡದ ಹೊಸಯಲ್ಲಾಪುರ, ಲಕ್ಷ್ಮಿ ನಗರ, ಜನ್ನತ್ ನಗರ, ದಾನೇಶ್ವರನಗರ, ಗಾಂಧಿನಗರ, ಸೇರಿದಂತೆ ವಿವಿಧ ಕಡೆಗಳಲ್ಲಿ ಗಬ್ಬುನಾತ ಹರಡುತ್ತಿದೆ.

ಇದರಿಂದಾಗಿ ಬೇಸತ್ತು ಹೋಗಿರುವ ಜನತೆ ಈ ಹಿಂದೆ ಹುಬ್ಬಳ್ಳಿ ಧಾರವಾಡ
ಮಹಾನಗರ ಪಾಲಿಕೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

ಆಗ ಶಾಸಕರು ಶೀಘ್ರವಾಗಿ ಸಮಸ್ಯೆ ಬಗೆಹರಿಯಲಿದೆ. ತ್ಯಾಜ್ಯ ನಿರ್ವಹಣೆ ಘಟಕ ಆರಂಭಿಕ ಹಂತದಲ್ಲಿ ಇದೆ ಎಂದು ಭರವಸೆ ನೀಡಿದ್ದರು.

ಆದರೆ ಈವರೆಗೆ ಅವರ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ನಾವು ದಿನನಿತ್ಯ ನಮ್ಮ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆಎಂದು ಲಕ್ಷ್ಮಿ ನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *