ಧಾರವಾಡ prajakiran. com :
ಧಾರವಾಡದ ಸಿದ್ದೇಶ್ವರ ಕಾಲೋನಿಯಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 62 ಕೋವಿಡ್ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಚ್ಚರಿ ಹಾಗೂ ದುರಂತದ ಸಂಗತಿಯೆಂದರೆ ಅದರಲ್ಲಿ 12 ಜನ ಸೋಂಕಿತರು ಮಾತ್ರ ಕೋವಿಡ್ ಕಾಳಜಿ ಕೇಂದ್ರಕ್ಕೆ ದಾಖಲಾಗಿದ್ದಾರೆ. ಉಳಿದವರು ಕಾಳಜಿ ಕೇಂದ್ರಕ್ಕೆ ದಾಖಲಾಗಲು ಒಪ್ಪುತ್ತಿಲ್ಲ.
ಹೀಗಾಗಿ ಧಾರವಾಡ
ಜಿಲ್ಲಾಡಳಿತ ಇದನ್ನು ಪೂರ್ಣವಾಗಿ ಕಂಟೆನ್ಮೆಂಟ್ ಝೋನ್ ಆಗಿ ಡಿಕ್ಲೀಯರ್ ಮಾಡಿದೆ.
ಅಲ್ಲಿನ ಎಲ್ಲ ಸಂಪರ್ಕ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲು ಕ್ರಮಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.