ಬೆಳಗಾವಿ prajakiran.com :
ಯಮಕನಮರಡಿ ಪೊಲೀಸ್ ಠಾಣೆಯ ನಾಲ್ಕು ಕೆಜಿ ಬಂಗಾರ ನಾಪತ್ತೆ ಪ್ರಕರಣದ ಪ್ರಮುಖ ಕಿಂಗ್ ಪಿನ್ ಎನ್ನಲಾದ
ಕಿರಣ್ ವೀರನಗೌಡರ, ಐಜಿಪಿ ರಾಘವೇಂದ್ರ ಸುಹಾಸ್ ಅವರ ಜೊತೆಗೆ ಇದ್ದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪೋಟೋ ಐಜಿಪಿ ಕಚೇರಿಯಲ್ಲಿ ಅವರಿಗೆ ರಾಘವೇಂದ್ರ ಸುಹಾಸ ಅವರಿಗೆ ಸನ್ಮಾನ ಮಾಡಿದ್ದಾಗಿದೆ.
ಈ ಪೋಟೋ ಇದೀಗ ಹತ್ತು ಹಲವು ಅನುಮಾನ ಹುಟ್ಟು ಹಾಕಿದೆ.
ಈತ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಒಡನಾಟ ಹೊಂದಿದ್ದ ಆರೋಪ ಕೇಳಿ ಬಂದ ಬೆನ್ನಲ್ಲೇ ಪೋಟೋ ವೈರಲ್ ಮಹತ್ವ ಪಡೆದಿದೆ.
ಈತನೇ ಮಂಗಳೂರಿನ ಮೂಲಕ ಮಹಾರಾಷ್ಟ್ರಕ್ಕೆ ಹೊರಟ್ಟಿದ್ದ ಎರ್ಟಿಗಾ, ವಾಹನದ ಮಾಹಿತಿಯನ್ನು ನೀಡಿ. ಯಮಕನಮರಡಿ ಪೊಲೀಸ್ ಅಧಿಕಾರಿ ವರ್ಗದವರ ಮೂಲಕ ತಡೆ ಹಿಡಿದಿದ್ದ.
ಆನಂತರ ವಾಹನ ಮಾಲೀಕ ವಿವೇಕ್ ಪೂಜಾರಿ ಬಳಿ 27 ಲಕ್ಷಕ್ಕೆ ಡೀಲ್ ಕುದುರಿಸಿದ್ದ.
ಹಣ ಪಡೆದ ಬಳಿಕ ವಾಹನ ಬಿಡಿಸಲು ಪ್ರಯತ್ನಿಸಿದ್ದ. ಆದರೆ ಅಷ್ಟೋತ್ತಿಗಾಗಲೇ ಪ್ರಕರಣ ದಾಖಲಾಗಿದ್ದರಿಂದ ಪಿಎಸ್ ಐ ರಮೇಶ ವಾಹನ ಬಿಡುಗಡೆ ಮಾಡಿರಲಿಲ್ಲ.
ಹೀಗಾಗಿ ವಾಹನದ ಗಾಜು ಒಡೆದು ಅದರಲ್ಲಿ ಇದ್ದ ಬಂಗಾರ ತೆಗೆದು ಇದು ಕಳ್ಳತನ ವೆಂಬಂತೆ ಬಿಂಬಿಸಿ ಹೊಸ ಗಾಜು ಪೊಲೀಸರ ಮೂಲಕವೇ ಹಾಕಿಸಿದ್ದರು.
ಇದರಿಂದಾಗಿ ಯಮಕನಮರಡಿ ಪೊಲೀಸ್ ಅಧಿಕಾರಿ ವರ್ಗದವರು ಪರದಾಡುವಂತಾಗಿದೆ.
ಬ್ರೋಕರ್ ಕಿರಣ ಈ ಹಿಂದೆ ಕೂಡ ಐಜಿಪಿ ಜೊತೆಗೆ ಶಾಮೀಲಾಗಿ ಹುಬ್ಬಳ್ಳಿ ಧಾರವಾಡದ ಹಲವು ಡೀಲ್ ಕುದುರಿಸಿದ್ದ ಎಂಬುದು ಗುಟ್ಟಾಗಿ ಉಳಿದಿಲ್ಲ.