ಧಾರವಾಡ prajakiran.com : ಕುರುಬ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ಶುಕ್ರವಾರ ಧಾರವಾಡದಲ್ಲಿ ಅಣುಕುಶವ ಯಾತ್ರೆ ಮಾಡಲಾಯಿತು.
ನಗರದ ಕಲಾಭವನದಿಂದ ಜಿಲ್ಲಾಧಿಕರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕುರುಬ ಸಮಾಜದ ಕಾರ್ಯಕರ್ತರು ಇದೇ ವೇಳೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೋಳ್ಳಿರಾಯಣ್ಣ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು,
ಸಂಗೋಳ್ಳಿರಾಯಣ್ಣ ಪೌಂಡೇಶನ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸರಕಾರದ ಧೋರಣೆಯನ್ನು ಖಂಡಿಸಿದರು.
ಈ ಸಂರ್ಭದಲ್ಲಿ ರವಿರಾಜ ಕಂಬಳಿ, ನಿಂಗಪ್ಪ ಜ್ಯೋತಿ ನಾಯ್ಕರ, ಮಹೇಶ ಹಕ್ಕಿ, ಮುತ್ತು ಕೆಲಗೇರಿ, ಕರೆಪ್ಪ ಹರ್ಲಿ, ಜುಂಜಪ್ಪ ಕಂಬಳಿ, ಶಿವಣ್ಣ ತುರಮರಿ, ಮೂಗಪ್ಪ ಸಾತಣ್ಣವರ, ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.