ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜನ್ಮದಿನದ ಹಿನ್ನಲೆಯಲ್ಲಿ ಧಾರವಾಡದ ವಿವಿಧ ಸ್ಥಳದಲ್ಲಿ ಅನೇಕ ಬ್ಯಾನರ್ ಗಳನ್ನು ಹಾಕಲಾಗಿತ್ತು.
ಆದರೆ ಸಿಬಿಐ ಅಧಿಕಾರಿಗಳು ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಬೆನ್ನಲ್ಲೇ ಅವುಗಳನ್ನೂ ತೆರವುಗೊಳಿಸಲಾಗಿದೆ.
ರಾಜಕೀಯ ಕುತಂತ್ರದಿಂದ ಬಂಧನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದ್ದರು. ಅದರ ನಡುವೆ ಆಡಳಿತ ಪಕ್ಷದ ಕುಮ್ಮಕ್ಕಿನಿಂದ ಅವರ ಹುಟ್ಟು ಹಬ್ಬದ ಅಂಗವಾಗಿಅಳವಡಿಸಲಾದ ಬ್ಯಾನರ್ ಗಳನ್ನುಕೂಡ ತೆರವುಗೊಳಿಸಲಾಗಿದೆ.
ಈ ತರಹದ ದ್ವೇಷದ ರಾಜಕಾರಣ ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಆನಂದ ಸಿಂಗನಾಥ್ ಆರೋಪಿಸಿದ್ದಾರೆ.
ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ನಗರದ ಹಲವಡೆ ಪಾಲಿಕೆ ಪರವಾನಿಗೆ ಇಲ್ಲದೆ ಅಳವಡಿಸಿದ್ದರು.
ಅದಕ್ಕೆ ತೆರವುಗೊಳಿಸಲಾಗಿದೆ. ಪರವಾನಿಗೆ ಪಡೆದಿದ್ದರೆ ತೆರವುಗೊಳಿಸುತ್ತಿರಲಿಲ್ಲಎಂದಿದ್ದಾರೆ.