ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರದಲ್ಲಿ
*ಇಂದು ಒಟ್ಟು 29 ನಾಮಪತ್ರ ಸಲ್ಲಿಕೆ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ* *ಹೆಗಡೆ*
*ಧಾರವಾಡ ಪ್ರಜಾಕಿರಣ.ಕಾಮ್ ಏ.18 : ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿದ್ದು, ಇಂದು (ಏ.18) ನವಲಗುಂದ 4, ಕುಂದಗೋಳ 4, ಧಾರವಾಡ 3, ಹುಬ್ಬಳ್ಳಿ ಧಾರವಾಡ ಪೂರ್ವ 2, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ 4, ಹುಬ್ಬಳ್ಳಿ ಧಾರವಾಡ ಪಶ್ಚಿಮ 6 ಮತ್ತು ಕಲಘಟಗಿ 6 ಸೇರಿದಂತೆ ಒಟ್ಟು 29 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನವಲಗುಂದ-69 ವಿಧಾನಸಾಭಾ ಮತಕ್ಷೇತ್ರಕ್ಕೆ ನಿಂಗರಡ್ಡಿ ಹನಮರಡ್ಡಿ ಕೋನರಡ್ಡಿ (ಭಾ.ರಾ.ಕಾಂ) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ, ವಿನಯಕುಮಾರ ಪರಪ್ಪ ಮ್ಯಾಗೇರಿ (ಪಕ್ಷೇತರ), ಮಲ್ಲಪ್ಪ ಕೃಷ್ಣಪ್ಪ ಹೆಬಸೂರ (ಪಕ್ಷೇತರ ಅಭ್ಯರ್ಥಿ)
ಮತ್ತು ಕುಂದಗೋಳ-70 ವಿಧಾನಸಭಾ ಮತಕ್ಷೇತ್ರಕ್ಕೆ ಯಲ್ಲಪ್ಪ ಹಣಮಪ್ಪ ದಬಾಗೊಂಡಿ (ಪಕ್ಷೇತರ ಅಭ್ಯರ್ಥಿ), ಹಜರತಲಿಶೇಖ ಅಲ್ಲಾಸಾಬ ಜೊಡಮನಿ (ಪಕ್ಷೇತರ), ಕುಸುಮಾವತಿ ಚನ್ನಬಸಪ್ಪ ಶಿವಳ್ಳಿ (ಭಾ.ರಾ.ಕಾಂ), ನಬಿಸಾಬ ಪಕಿರಸಾಬ ನದಾಪ (ಪಕ್ಷೇತರ)
ಮತ್ತು ಧಾರವಾಡ -71 ವಿಧಾನಸಭಾ ಮತಕ್ಷೇತ್ರಕ್ಕೆ ಅಮೃತ ಅಯ್ಯಪ್ಪ ದೇಸಾಯಿ (ಭಾ.ಜ.ಪ.) ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ
ಮತ್ತು ಹುಬ್ಬಳ್ಳಿ ಧಾರವಾಡ ಪೂರ್ವ-72 ವಿಧಾನಸಭಾ ಮತಕ್ಷೇತ್ರಕ್ಕೆ ಡಾ.ಎಸ್.ಕ್ರಾಂತಿಕಿರಣ (ಭಾ.ಜ.ಪ.) ಎರಡು ಪ್ರತಿಯಲ್ಲಿ ನಾಮಪತ್ರ ಸಲ್ಲಿಕೆ,
ಮತ್ತು ಹುಬ್ಬಳ್ಳಿ ಧಾರವಾಡ ಸೆಂಟ್ರಲ್-73 ವಿಧಾನಸಭಾ ಮತಕ್ಷೇತ್ರಕ್ಕೆ ಸೌಲಂ ಸೊಲೊಮೊನ ಜೋಸೆಫ್ (ಸ್ವತಂತ್ರ ಅಭ್ಯರ್ಥಿ), ಮಹೇಶ ಚನ್ನವೀರಪ್ಪ ಟೆಂಗಿನಕಾಯಿ (ಭಾ.ಜ.ಪ.), ವಿಕಾಸ ಬಸವಂತಪ್ಪ ಸೊಪ್ಪಿನ (ಆಮ್ ಆದ್ಮಿ ಪಕ್ಷ), ರಾಘವೇಂದ್ರ ಪ್ರಕಾಶ ಕಠಾರೆ (ಹಿಂದೂಸ್ತಾನ ಜನತಾ ಪಕ್ಷ)
ಮತ್ತು ಹುಬ್ಬಳ್ಳಿ ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರಕ್ಕೆ ಶಿವರಾಜ ರಾಮಣ್ಣಾ ಕೊರಸರ (ಪಕ್ಷೇತರ), ಅರವಿಂದ ಚಂದ್ರಕಾಂತ ಬೆಲ್ಲದ (ಭಾ.ಜ.ಪ.) ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ, ಸಂತೋಷ ವಿಠ್ಠಲರಾವ್ ನಂದೂರ (ಉತ್ತಮ ಪ್ರಜಾಕೀಯ ಪಕ್ಷ), ಮಲ್ಲಿಕಾರ್ಜುನ ದೇವೇಂದ್ರಪ್ಪ ರೊಟ್ಟಿಗವಾಡ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)
ಮತ್ತು ಕಲಘಟಗಿ-75 ವಿಧಾನಸಭಾ ಮತಕ್ಷೇತ್ರಕ್ಕೆ ಬಸವಲಿಂಗಪ್ಪ ಈರಪ್ಪ ಬುಗಡಿ (ಉತ್ತಮ ಪ್ರಜಾಕೀಯ ಪಕ್ಷ), ಮಂಜುನಾಥ ಗಂಗಪ್ಪ ಜಕ್ಕಣ್ಣವರ (ಆಮ್ ಆದ್ಮಿ ಪಕ್ಷ), ಶಂಕರ ನಿಂಗಪ್ಪ ಹುದ್ದಾರ (ಪಕ್ಷೇತರ), ಬಸವರಾಜ ಉಳವಪ್ಪ ದೊಡಮನಿ (ಪಕ್ಷೇತರ), ಬಸವರಾಜ ಗಂಗಪ್ಪ ಸಂಗಣ್ಣವರ (ಪಕ್ಷೇತರ), ಮಲ್ಲಿಕಾ ಬಸವರಾಜ ದೊಡಮನಿ (ಪ್ರೌಟಿಸ್ಟ್ ಬ್ಲಾಗ್ ಇಂಡಿಯಾ) ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.