ಅಪರಾಧ

ಧಾರವಾಡ ಸಮೀಪದ ಚಿಕ್ಕ ಉಳ್ಳಿಗೇರಿಯಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವು, ಒಬ್ಬರು ಗಂಭೀರ

ಬೆಳಗಾವಿ prajakiran.com  : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ಸಂಜೆ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಇನ್ನೂ ಓರ್ವಳ ಗೆ ಗಂಭೀರ ಗಾಯವಾಗಿದ್ದು,ಸಮೀಪದ ಇನಾಂಹೊಂಗಲ ಗ್ರಾಮದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು,ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ರಿದ್ರೆ ಓರ್ವಳಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಭಾಗವ್ವ ಕಡಕೋಳ (50) ಯಲ್ಲವ್ವಾ ಇಂಚಲ (30) ಎಂದು ಗುರುತಿಸಲಾಗಿದ್ದು,ಗಾಯಾಳು ರೇಣವ್ವಾ […]

ಅಪರಾಧ

ಧಾರವಾಡದಲ್ಲಿ ಐದು ಸಾವಿರ ದೋಚಲು ಹಾಡಹಗಲೇ ವಯೋವೃದ್ದನ ಮೇಲೆ ಹಲ್ಲೆ ಮಾಡಿದ ಇಬ್ಬರು ಕಿರಾತಕರು ಅಂದರ್

ಧಾರವಾಡ prajakiran.com : ಐದು ಸಾವಿರ ರೂಪಾಯಿ ಹಣಕ್ಕೆ ಹಾಡಹಗಲೇ ವಯೋವೃದ್ದನ ಮೇಲೆ ಹಲ್ಲೆ ಮಾಡಿದ ಇಬ್ಬರು ಕಿರಾತಕರು ಅಂದರ್ ಆದ ಘಟನೆ ಧಾರವಾಡದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಧಾರವಾಡ ಸಿಬಿಟಿಯಿಂದ ಆಟೋ ಹತ್ತಿದ್ದ ಹಿರಿಯ ನಾಗರಿಕ ನಾರಾಯಣ ಜಾಧವ ಮಗಳ‌ ಮನೆಗೆ ಕರಿಕಟ್ಟಿ ಗ್ರಾಮಕ್ಕೆ ಹೋಗಲು ಹತ್ತಿದ್ದ. ಈ ಅಜ್ಜನ ಬಳಿ ಹಣವಿರುವುದನ್ನು ಖಾತ್ರಿ ಪಡಿಸಿದಕೊಂಡ ಹಾಜಿ ಅಲಿ ಹಾಗೂ ತಾಹೀರ್ ಸವಾರ ಆಟೋ ಚಾಲಕ ಸೈಯದ್ ಜೊತೆಗೆ ಸೇರಿಕೊಂಡು ಹಣ ದೋಚಲು ಸಂಚು ರೂಪಿಸಿದ್ದಾರೆ. […]

ಅಪರಾಧ

ಗದಗದಲ್ಲಿ 4 ಲಕ್ಷ ಮೌಲ್ಯದ ಅಕ್ರಮ ಅಮೋನಿಯಂ ನೈಟ್ರೇಟ್ ಪತ್ತೆ

ಗದಗ prajakiran.com : 4 ಲಕ್ಷ ಮೌಲ್ಯದ ಅಕ್ರಮ ಅಮೋನಿಯಂ ನೈಟ್ರೇಟ್ ಪತ್ತೆಯಾದ ಘಟನೆ ಗದಗ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇವಡ್ಡಟ್ಟಿ ಗ್ರಾಮದ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ 135 ಪ್ಯಾಕೇಟ್ ಅಮೋನಿಯಂ ನೈಟ್ರೇಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಕಿಮತ್ತು ರೂಪಾಯಿ 4 ಲಕ್ಷ ಮೌಲ್ಯದಾಗಿದ್ದು, ಹಾಗೂ ಕೃತ್ಯಕ್ಕೆ ಬಳಸಿದ ಲಾರಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 2 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ತನಿಖೆ ಮುಂದುವರೆದಿದೆ ಎಂದು ಮುಂಡರಗಿ ಪೊಲೀಸರು […]

ಅಪರಾಧ

ಧಾರವಾಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮತ್ತಿಬ್ಬರ ಬಂಧನ, ೭.೬೦ ಲಕ್ಷ ಜಪ್ತಿ

ಧಾರವಾಡ prajakiran.com : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಧಾರವಾಡದ ಉಪನಗರ ಠಾಣೆಯ ಪೊಲೀಸರು ಸಪ್ತಾಪೂರ ಬಡಾವಣೆಯಲ್ಲಿ ಬಂಧಿಸಿದ್ದಾರೆ. ಧಾರವಾಡ ತಾಲೂಕಿನ ತಡಸಿನಕೊಪ್ಪ ಗ್ರಾಮದ ಅವಿನಾಶ ಉರ್ಫ್ ಅವಿ ಚವ್ಹಾಣ ಮತ್ತು ಕೆಲಗೇರಿ ಆಂಜನೇಯ ನಗರದ ಮಂಜುನಾಥ ವಾಲೀಕಾರ ಬಂಧಿತ ಆರೋಪಿಗಳು. ಬಂಧಿತರಿಂದ ೭,೬೦,೧೦೦ ಲಕ್ಷ ರೂಪಾಯಿ ನಗದು ಮತ್ತು ಮೂರು ಮೊಬೈಲ್‌ಗಳನ್ನು ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಸಪ್ತಾಪೂರ ಬಡಾವಣೆಯ ಆಸ್ಪತ್ರೆಯ ರಸ್ತೆ ಬದಿಯಲ್ಲಿ ಶಾರ್ಜಾದಲ್ಲಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಪಂದ್ಯದ […]

ಅಪರಾಧ

ಧಾರವಾಡದಲ್ಲಿ ಸಿಡಿಲು ಬಡಿದು ಕೃಷಿ ವಿವಿ ಹಂಗಾಮಿ ನೌಕರ ಮಹಿಳೆ ಸಾವು

‌ಧಾರವಾಡ prajakiran.com : ಶನಿವಾರ ಸಂಜೆ ಸುರಿಯುತ್ತಿರುವ ಧಾರಾಕಾರ ಮಳೆಗೆ  ಸಿಡಿಲು ಬಡಿದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹಂಗಾಮಿ ನೌಕರರಾಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಕಳೆದ 11 ವರ್ಷಗಳಿಂದ ಹಂಗಾಮಿ ನೌಕರರಾಗಿ ಕೆಲಸ ನಿರ್ವಹಣೆ ಮಾಡಿಕೊಂಡು ಬಂದಿದ್ದ, ಸರಸ್ವತಿ ಪಾಟೀಲ ಎಂಬ ಮಹಿಳೆ ಮಧ್ಯಾಹ್ನ 3-30 ಗಂಟೆಗೆ ಬೀಜ ಘಟಕದಲ್ಲಿ ಕೆಲಸ ನಿರ್ವಹಣೆ ಮಾಡುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಘಟನೆ ನಡೆದ ಮಾಹಿತಿಯನ್ನು ಅರಿತು ಸ್ಥಳಕ್ಕೆ ಧಾರವಾಡ ಉಪನಗರ ಪೊಲೀಸ್ ಭೇಟಿ […]

ಅಪರಾಧ

ಧಾರವಾಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂವರ ಬಂಧಿಸಿ, 3.46 ಲಕ್ಷ ಜಪ್ತಿ ಮಾಡಿದ ಪೊಲೀಸರು

ಧಾರವಾಡ prajakiran.com : ಧಾರವಾಡದ ಕರ್ನಾಟಕ ಕಾಲೇಜು ರಸ್ತೆ ಬದಿಯಲ್ಲಿ ನಿನ್ನೆ ದುಬೈನಲ್ಲಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ನಾರಾಯಣಪೂರದ ಅಕ್ಷಯ , ಶ್ರೀರಾಮನಗರದ ಮಹ್ಮದಯಾಸೀನ್ ಅಬ್ದುಲರಶೀದ ಗಬ್ಬೂರ ಮತ್ತು ಜಕಣಿಭಾವಿ ರಸ್ತೆಯ ಕಿಶೋರ ಉಮೇಶ ಪೂಜಾರಿ ಎಂಬುವರೇ ಬಂಧಿತ ಆರೋಪಿಗಳು. ಬಂಧಿತರಿಂದ 3.46 ಲಕ್ಷ  ನಗದು ಮತ್ತು ಮೂರು ಮೊಬೈಲ್‌ಗಳನ್ನು ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ. ಉಪನಗರ ಠಾಣೆಯ ಸಿಪಿಐ ಪ್ರಮೋದ ಯಲಿಗಾರ […]

ಅಪರಾಧ

ಧಾರವಾಡದಲ್ಲಿ ಇಸ್ಪೀಟು ಆಡುತ್ತಿದ್ದ ೯ ಜನರ ಬಂಧನ 

ಧಾರವಾಡ prajakiran.com : ಇಸ್ಪೀಟು ಆಡುತ್ತಿದ್ದ ೯ ಜನರನ್ನು ಧಾರವಾಡ ಅಮ್ಮಿನಭಾವಿ ರಸ್ತೆಯಲ್ಲಿರುವ ದರ್ಗಾ ಬಳಿ ಧಾರವಾಡ ಗ್ರಾಮಿಣ ಠಾಣೆಯ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಧಾರವಾಡ ವಿವಿಧ ಬಡಾವಣೆಗಳ ಶಿವಾಜಿ ಈಶ್ವರ ಮದನಿ, ಉಸ್ಮಾನಗಣಿ ಮಹ್ಮದಹಾಸೀಂ ಶಿರಹಟ್ಟಿ, ಮಹಮ್ಮದಗೌಸ ಅಲ್ಲಾಭಕ್ಷ ಬೆಟಗೇರಿ, ಆಸೀಫ್‌ಶೇಖ ಮಹ್ಮದಸಾಬ ಶೇಖ, ಮೈನುದ್ದೀನ್ ಇಸ್ಮಾಯಿಲಸಾಬ ದೊಡವಾಡ, ಸಂತೋಷ ವಿರುಪಾಕ್ಷಪ್ಪ ಧರ್ಮಂತನವರ,  ಮುಕ್ತಿಯಾರ ಅಬ್ದುಲಖಾನ ತಂಬೋಲಿ, ಅಶೋಕ ಯಲ್ಲಪ ಬಾವಿ ಮತ್ತು ಕೃಷ್ಣಾ ನಿಂಗಪ್ಪ […]

ಅಪರಾಧ

ಧಾರವಾಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೊರಾಗಿ ನಡೆಯುತ್ತಿದೆ. ಧಾರವಾಡದ ಸತ್ತೂರ ಬಳಿಯ ಉದಯಗಿರಿ ಡಬಲ್ ರೋಡ್ ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡ ಮೇಲೆ ಬೆಟ್ಟಿಂಗ್ ಆಡಿಸಿಕೊಳ್ಳುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಹುಬ್ಭಳ್ಳಿ-ಧಾರವಾಡ ಸಿಸಿಬಿ   ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನವಲೂರಿನ ಅರ್ಜುನ ಮೋಹನ ನಲವಡಿ (28) ಹಾಗೂ ಎಂ. ಆರ್. ನಗರದ ಈರೇಶ ಚನ್ನಬಸಪ್ಪ ಎಣಿಗಾರ (28) ಎಂದು ಗುರುತಿಸಲಾಗಿದೆ. ಪ್ರತಿ ತಂಡಗಳ ಆಟಗಾರರ ಮೇಲೆ, […]

ಅಪರಾಧ

ಧಾರವಾಡದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪಿ ಬಂಧನ

ಧಾರವಾಡ prajakiran.com :  ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ  ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡದ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ರಾಜೀವ್ ಗಾಂಧಿನಗರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೋಂದ ಮಹಿಳೆ ಮಂಜುಳಾ ಗರಗ (40)  ಈ ಕುರಿತು ನೀಡಿದ ದೂರಿನ ಮೇಲೆ ಆರೋಪಿ ಹುಬ್ಬಳ್ಳಿಯ ನಿವಾಸಿ ಯಲ್ಲಪ್ಪ ಎಲಿಗಾರ (48) ನನ್ನು ಬಂಧಿಸುವಲ್ಲಿ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೋಂದ ಮಹಿಳೆಯನ್ನು ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆರೋಪಿಯ ವಿರುದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ […]

ಅಪರಾಧ

ಧಾರವಾಡದಲ್ಲಿ ಯುವಕನಿಂದ ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯ

ಧಾರವಾಡ prajakiran.com : ಯುವಕನಿಂದ ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಧಾರವಾಡ ತಾಲೂಕಿನ ಗ್ರಾಮವೊಂದರಲ್ಲಿ ನಿನ್ನೆ ನಡೆದಿದೆ. ಗ್ರಾಮದ ಹುಸೇನಸಾಬ ಮರ್ದಾನಸಾಬ ಬಾಳಣ್ಣವರ ಎಂಬಾತನೇ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ನಿನ್ನೆ ಸಂಜೆ ಬಹಿರ್ದೆಸೆಗೆ ತೆರಳುತ್ತಿದ್ದ ೯ ವರ್ಷದ ಬಾಲಕಿಯನ್ನು ಎಳೆದುಕೊಂಡು ಹೋಗಿ ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಬಾಲಕಿ ಕೂಗಿಕೊಂಡಾಗ ಅಕ್ಕಪಕ್ಕದವರು ಓಡಿ ಬಂದು, ಹುಸೇನಸಾಬನನ್ನು ಥಳಿಸಿ ಯುವತಿಯನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ. […]