hubli kims
ರಾಜ್ಯ

ಕೊನೆಗೂ ಎಚ್ಚೆತ್ತ  ಧಾರವಾಡ ಜಿಲ್ಲಾಡಳಿತ : ಅಂಬ್ಯುಲೆನ್ಸ್ ಸಿಗದೆ ‌ಪರದಾಡಿದ್ದ ಹುಬ್ಬಳ್ಳಿ ವ್ಯಕ್ತಿ ಆಸ್ಪತ್ರೆಗೆ ದಾಖಲು  





ಹುಬ್ಬಳ್ಳಿ prajakiran.com : ಕಳೆದ ರಾತ್ರಿ 11 ಗಂಟೆಯಿಂದ ಅಂಬ್ಯುಲೆನ್ಸ್ ಗಾಗಿ ಕಾದು ಕುಳಿತಿದ್ದ ಕರೋನಾ ಸೋಂಕಿತ ವ್ಯಕ್ತಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ  ನಂತರ ಕೊನೆಗೂ ಆಸ್ಪತ್ರೆ ಸೇರಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ಕರೊನಾ ಸೋಂಕಿತನೊಬ್ಬ ನಿನ್ನೇ ರಾತ್ರಿಯಿಂದ ಅಂಬ್ಯುಲೆನ್ಸ್ ಗಾಗಿ ಕಾದು‌ ಕುಳಿತ್ತಿದ್ದ. ಆದರೆ ಆತನನ್ನು ಅಂಬುಲೆನ್ಸ್ ಸಿಬ್ಬಂದಿ ಕರೆದುಕೊಂಡು ಹೋಗಿರಲಿಲ್ಲ.

ಹೀಗಾಗಿ ಆತ ತನಗೆ ಕರೆದುಕೊಂಡು ಹೋಗಲು ಅಂಬುಲೈನ್ ಬಂದಿಲ್ಲ ಎಂದು ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಗೆ ಬಂದು ತನ್ನ ಅಳಲು ತೋಡಿಕೊಂಡಿದ್ದ.



ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಸೋಂಕಿತರು ಪರದಾಡುತ್ತಿದ್ದ ಪರಿಸ್ಥಿತಿ ಹುಬ್ಬಳ್ಳಿಯಲ್ಲಿ ಬಂದಿದೆ ಎಂದು ಸುದ್ದಿ ವೈರಲ್ ಆದ ಬೆನ್ನಹಿಂದೆಯೇ ಕೊನೆಗೂ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಂಡಿದೆ.   

ಅಂಬುಲೈನ್ ಬಾರದ ಪರಿಣಾಮ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿಯೇ ಸೋಂಕಿತ ಉತ್ತರ ಪ್ರದೇಶ ಮೂಲದ  ವ್ಯಕ್ತಿ ಹಳೇ ಬಸ್ ನಿಲ್ದಾಣ ಬಳಿಯ ಲಾಡ್ಜ್ ನಲ್ಲಿ  ವಾಸವಾಗಿದ್ದ.

ಕೊನೆಗೆ ಆತ ತಂಗಿದ್ದ ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಆತನನ್ನು ವಾಹನದಲ್ಲಿ ಕರೆದುಕೊಂಡು ಹೋಗಿ ಪ್ರಕರಣಕ್ಕೆ ತೇಪೆ ಹಾಕಿದರು.



ಹುಬ್ಬಳ್ಳಿಯಲ್ಲಿ ರೈಲ್ವೆ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಈತ  ಅಂಬ್ಯುಲೆನ್ಸ್ ಬಗ್ಗೆ  ಪೊಲೀಸರ ಬಳಿ ಬಂದು ಸಹಾಯ ಕೇಳಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲ.

ಇದು ಹುಬ್ಬಳ್ಳಿ-ಧಾರವಾಡಅವಳಿ ನಗರದ ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *