ಚಿಕ್ಕಮಗಳೂರು Prajakiran.com : ಕೊರೋನಾ ಎರಡನೇ ಅಲೆ ಅದೇಷ್ಟೋ ಜನರ ಬದುಕನ್ನ ದುಸ್ಥಿತಿಗೆ ತಂದು ನಿಲ್ಲಿಸಿದೆ. ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಮದುಮಗ ಇಂದು ಕೊರೋನಾ ಸೋಂಕಿಗೆ ಬಲಿಯಾಗಿದ್ದಾನೆ.
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ದೇವರಕೂಡಿಗೆ ಗ್ರಾಮದ ಪೃಥ್ವಿರಾಜ್(32) ಕೊರೋನಾ ಸೋಂಕಿಗೆ ಬಲಿಯಾದ ದುರ್ದೈವಿ.
ಇಂದು ಪೃಥ್ವಿರಾಜ್ ಅವರ ಮದುವೆ ನಿಶ್ಚಯವಾಗಿತ್ತು. ಹತ್ತು ದಿನದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದರು.
ಆದರೆ ಕೊರೋನಾ ಕಾರಣದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಪೃಥ್ವಿ ಮೃತಪಟ್ಟಿದ್ದಾರೆ.