ದಾವಣಗೆರೆ prajakiran.com : ರಾಜ್ಯದಲ್ಲಿ ಕೆಲವರು ಸ್ವಯಂ ಘೋಷಿತ ಮುಖ್ಯಮಂತ್ರಿಗಳಾಗಿದ್ದಾರೆ. ಜೊತೆಗೆ ಸೂಟು ಬೂಟು ರೆಡಿಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿ ಕಾರಿದರು.
ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೆಲ ಶಾಸಕರಿಗೆ ಒಬ್ಬರು ಕರೆ ಮಾಡಿ, ನಾನೇ ಮುಂದಿನ ಸಿಎಂ ಆಗ್ತಿನಿ. ನನಗೆ ಬೆಂಬಲ ಕೊಡಿ ಎಂದು ಕೋರುತ್ತಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೆಸರು ಹೇಳದೆ ಪರೋಕ್ಷವಾಗಿ ಗುಡುಗಿದರು.
ಆದರೆ ಅದು ಎಂದಿಗೂ ಸಫಲವಾಗಲ್ಲ ಎಂದು ಖಾರವಾಗಿ ಟೀಕಿಸಿದರು..
ಇನ್ನು ಕೆಲವರು ( ಶಾಸಕ ಅರವಿಂದ ಬೆಲ್ಲದ ) ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡುತ್ತಾರೆ. ದೂರು ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಆದರೆ ಸಿಎಂ ಯಡಿಯೂರಪ್ಪ ಅವರಿಗೆ ಅಪಾರ ಶಾಸಕರ ಬೆಂಬಲವಿದೆ. ಅವರೆ ಮುಂದಿನ ಅವಧಿಗೆ ಮುಖ್ಯಮಂತ್ರಿಯಾಗಿ ಇನ್ನು ಎರಡು ವರ್ಷಗಳ ಕಾಲ ಮುಂದುವರೆಯಲಿದ್ದಾರೆ.
ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಅಭಯ ನೀಡಿದರು.
ನಾವು ಯಡಿಯೂರಪ್ಪ ಪರ ಭೇಟಿಯಾಗಲು ಸಮಯಾವಕಾಶ ಕೇಳಿದ್ದೇವೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮತಿ ನೀಡಿದ್ದಾರೆ.
ನಾವು ಕೂಡ ನಮ್ಮ ವಾದವನ್ನು ಮಂಡಿಸುತ್ತೇವೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದರು.