ಶಿವಮೊಗ್ಗ prajakiran.com : ಧಾರವಾಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ ದೆಹಲಿ ಪ್ರವಾಸ ಕೈಗೊಂಡು ಪಕ್ಷದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.
ಕೆಲವರು ಸ್ವಯಂ ಘೋಷಿತ ಸಿಎಂ ಆಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ತಿರುಗೇಟು ನೀಡಿದ್ದಾರೆ.
ಎನೂ ಮಾಡುವುದು ಕೆಲವರಿಗೆ ಅಧಿಕಾರಕ್ಕೇರುವ ಚಪಲ. ಹೀಗಾಗಿ ದೆಹಲಿ ಸುತ್ತಾಡಿ ಸುದ್ದಿ ಹರಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅವರು ಸೋಮವಾರ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅರವಿಂದ್ ಬೆಲ್ಲದ್ ಈಗ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದು ಹೇಗೆಂದರೆ ಮದುವೆ ಸೀಜನ್ ನಲ್ಲಿ ಓಲಗದ ಸದ್ದು ಕೇಳಿ ಮದುಮಗನಾಗುವ ಆಸೆಯಾದಂತೆ ಎಂದು ಚೇಡಿಸಿದ್ದಾರೆ.
ಅರವಿಂದ್ ಬೆಲ್ಲದ್ ಸಿಎಂ ಕನಸು ಕಾಣುತ್ತಿದ್ದಾರೆ. ಕನಸು ಕಾಣುವವರಿಗೆ ಬೇಡ ಎನ್ನುವವರು ಯಾರು ಎಂದು ಆಯನೂರು ಮಂಜುನಾಥ ಕುಟುಕಿದರು.