ರಾಜ್ಯ

ಧಾರವಾಡ ಶಾಸಕ ಬೆಲ್ಲದ್ ದೆಹಲಿ ಭೇಟಿ : ಕೆಲವರಿಗೆ ಅಧಿಕಾರಕ್ಕೇರುವ ಚಪಲ ಎಂದ ಆಯನೂರು….!

ಶಿವಮೊಗ್ಗ prajakiran.com : ಧಾರವಾಡ  ಬಿಜೆಪಿ ಶಾಸಕ ಅರವಿಂದ ಬೆಲ್ಲದ ದೆಹಲಿ ಪ್ರವಾಸ ಕೈಗೊಂಡು ಪಕ್ಷದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.

ಕೆಲವರು ಸ್ವಯಂ ಘೋಷಿತ ಸಿಎಂ ಆಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ತಿರುಗೇಟು ನೀಡಿದ್ದಾರೆ‌.

ಎನೂ ಮಾಡುವುದು ಕೆಲವರಿಗೆ ಅಧಿಕಾರಕ್ಕೇರುವ ಚಪಲ. ಹೀಗಾಗಿ ದೆಹಲಿ ಸುತ್ತಾಡಿ ಸುದ್ದಿ ಹರಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಅವರು ಸೋಮವಾರ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಅರವಿಂದ್ ಬೆಲ್ಲದ್ ಈಗ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದು ಹೇಗೆಂದರೆ ಮದುವೆ ಸೀಜನ್ ನಲ್ಲಿ ಓಲಗದ ಸದ್ದು ಕೇಳಿ ಮದುಮಗನಾಗುವ ಆಸೆಯಾದಂತೆ ಎಂದು ಚೇಡಿಸಿದ್ದಾರೆ.

ಅರವಿಂದ್ ಬೆಲ್ಲದ್ ಸಿಎಂ ಕನಸು ಕಾಣುತ್ತಿದ್ದಾರೆ. ಕನಸು ಕಾಣುವವರಿಗೆ ಬೇಡ ಎನ್ನುವವರು ಯಾರು ಎಂದು ಆಯನೂರು ಮಂಜುನಾಥ ಕುಟುಕಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *