ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಸವರಾಜ ಕೆಲಗೇರಿ ಎಂಬುವವರ ಪತ್ನಿ ನಾನು ಎಂದು ಹೇಳಿಕೊಳ್ಳುತ್ತಿದ್ದ ಅನಿತಾ ರೇವಣಕರ್
ಎಂಬ ಮಹಿಳೆ ಶಾಂತಿನಗರದ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಶನಿವಾರ ನಡೆದಿದೆ.
ಇದರಿಂದಾಗಿ ಬಿಜೆಪಿ ಮುಖಂಡ ಬಸವರಾಜ್ ಕೆಲಗೇರಿ ಎಂಬಾತನಿಗೆ ಇದೀಗ ಸಂಕಷ್ಟ ಎದುರಾಗಿದೆ.
ಈ ಮಹಿಳೆ ಮೇಲೆ ಈ ಹಿಂದೆ ಈತ ನಡು ಬೀದಿಯಲ್ಲಿಯೇ ಮಾರಣಾಂತಿಕ ಹಲ್ಲೆ ನಡೆಸಿದ್ದ. ಅಲ್ಲದೆ, ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲೂ ಸಹ ಮಾರಣಾಂತಿಕ ನಡೆಸಿದ್ದ ಆರೋಪಗಳಿವೆ.
ಈತನೇ ತನ್ನ ಗಂಡ, ನನ್ನನ್ನು ನಂಬಿಸಿ ಮದುವೆಯಾಗಿದ್ದ. ಹಲವು ವರ್ಷಗಳ ಕಾಲ ಸಂಸಾರ ನಡೆಸಿ, ನಿವೇಶನ ಮಾರಾಟ ಮಾಡಿದ 26 ಲಕ್ಷಕ್ಕೂ ಅಧಿಕ ಹಣ ನೀಡದೆ ವಂಚಿಸಿದ್ದ ಎಂದು ನೋಂದ ಮಹಿಳೆ ದೂರಿದ್ದಳು.
ಈ ಎಲ್ಲ ಘಟನೆಗಳು ನಡೆದು ಇನ್ನೂ ತಿಂಗಳು ಕಳೆದಿಲ್ಲ. ಅಷ್ಟರಲ್ಲಿ ಅನಿತಾ, ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ತನಗೆ ಸಹಾಯ ಮಾಡುವ ನೆಪದಲ್ಲಿಯೂ ಹಣವನ್ನ ಪೀಕಲಾಗಿದೆ ಎಂಬುದನ್ನ ಹೆಸರು ಸಮೇತ ನಮೂದು ಮಾಡಿದ್ದಾರೆನ್ನುವುದು ಗೊತ್ತಾಗಿದೆ.
ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.