ಅಪರಾಧ

ಧಾರವಾಡದ ಉಪನಗರ ಠಾಣೆ ಪೊಲೀಸರಿಗೆ ಹೆದರಿ ಕೈ ಕೊಯ್ದುಕೊಂಡ ರೌಡಿಶೀಟರ್ ಮನು….!

ಧಾರವಾಡ prajakiran.com :
ರೌಡಿಶೀಟರ್ ಒಬ್ಬ ಧಾರವಾಡದ ಉಪನಗರ ಠಾಣೆ ಪೊಲೀಸರಿಗೆ ಹೆದರಿ ಕೈ ಕೊಯ್ದುಕೊಂಡ ಘಟನೆ ಶನಿವಾರ ಸಂಜೆ ಧಾರವಾಡದ ರಾಮನಗರ ಅತ್ತಿಕೊಳ್ಳದಲ್ಲಿ ನಡೆದಿದೆ.

ಆತನನ್ನು ಮನು ಅಲಿಯಾಸ್ ಮನ್ಮಥ್ ಮಹಾರಾಜ್ ಕೊರವರ ಎಂದು ಗುರುತಿಸಲಾಗಿದೆ.

ತಕ್ಷಣ ಸ್ಥಳೀಯರು ಆತನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ‌.

ಇತನ ಮೇಲೆ ಈಗಾಗಲೇ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇದೆ.

ಇತನನ್ನು ಇತ್ತೀಚೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ರೌಡಿಶೀಟರ್ ಅಲ್ಲಾವುದ್ದೀನ್ ಅಲಿಯಾಸ್ ಡಲ್ಯಾ ನದಾಫ್ ಹಾಗೂ ರೌಡಿಶೀಟರ್ ದಿ. ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಹಂಚಿನಾಳ ಪುತ್ರ ಅರ್ಬಾಜ್ ಹಂಚಿನಾಳ ನಡುವಿನ ನಡೆದ ಗ್ಯಾಂಗ್ ವಾರ್ ನಲ್ಲಿ ಇತನ ವಿರುದ್ದ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ಹಾಗೂ ಸಾರ್ವಜನಿಕ ರಿಗೆ ಭಯ ಹುಟ್ಟುಹಾಕಿದ ಆರೋಪದ ಮೇಲೆ ಐಪಿಸಿ 380 ಪ್ರಕರಣ ದಾಖಲಾಗಿತ್ತು.

ಹಾಗಾಗಿ ಉಪನಗರ ಪೊಲೀಸರು ಇತನನ್ನು ಹಿಡಿಯಲು ಹುಡುಕಾಟ ನಡೆಸಿದ್ದರು. ಇದರ ಮಾಹಿತಿ ಅರಿತು ಹೆದರಿ, ಎರಡು ಕೈಗಳಿಗೆ ಬ್ಲೇಡಗಳಿಂದ ಹರಿದುಕೊಂಡಿದ್ದ. ಇದರಿಂದಾಗಿ ಆತನಿಗೆ ಸಾಕಷ್ಟು ರಕ್ತಸ್ರಾವ ಆಗಿತ್ತು.

ಘಟನೆ ನಡೆದ ಸ್ಥಳದಲ್ಲಿ ನಾನು ನೋಡುತ್ತಾ ನಿಂತಿದ್ದೆ. ಆದರೆ ನಾನು ಅವರ ಜಗಳದಲ್ಲಿ ಇರಲಿಲ್ಲ.

ಆದರೂ ಯಾರದು ಮಾತು ಕೇಳಿ ಧಾರವಾಡದ ಉಪನಗರ ಪೊಲೀಸರು ನನ್ನ ಹೆಸರಿನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾವು ಬದುಕಬೇಕೋ ಬೇಡವೋ ನೀವೆ ಹೇಳಿ ಎಂದು ಕಣ್ಣೀರು ಹಾಕಿದ್ದಾನೆ.

 ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಧಾರವಾಡದ ಉಪನಗರ ಠಾಣೆ ಪೊಲೀಸರಿಗೆ ಮತ್ತೆ ಸಾಕಷ್ಟು ಮುಜುಗರ ಉಂಟು ಮಾಡಿದೆ.

ಈ ಪ್ರಕರಣವನ್ನು ಹುಬ್ಬಳ್ಳಿ ಧಾರವಾಡ ಅವಳಿ‌ನಗರ ಪೊಲೀಸ್ ಆಯುಕ್ತರು ಯಾವ ರೀತಿ ಪರಿಗಣಿಸುತ್ತಾರೆ ಎಂಬುದು ಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *