ಧಾರವಾಡ prajakiran.com : ಅತ್ಯಾಚಾರ ಕೇಸ್ನಲ್ಲಿ ಧಾರವಾಡದ ಹಿರಿಯ ಅರಣ್ಯ ಅಧಿಕಾರಿಯೊಬ್ಬರ ಮೇಲೆ ಕೊನೆಗೂ ತನಿಖೆ ಆರಂಭಗೊಂಡಿದೆ.
ಒಂದೂವರೆ ವರ್ಷದ ನಂತರ ಅತ್ಯಾಚಾರ ಕೇಸ್ ಬೆಳಕಿಗೆ ಬಂದಿದೆ.
ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಅತ್ಯಾಚಾರ ಮಾಡಿದ್ದಾರೆ ಎಂದು ನೋಂದ ಯುವತಿ ಆರೋಪಿಸಿದ್ದಾಳೆ.
ಆ ಅಧಿಕಾರಿ ಪ್ರಭಾವಿಯಾಗಿದ್ದು, ಹಿರಿಯ
ಅರಣ್ಯ ಅಧಿಕಾರಿ ಪ್ರಸ್ತುತ ಬೆಂಗಳೂರಿನ ಅರಣ್ಯ ಭವನದಲ್ಲಿ ಸಿಸಿಎಫ್ ಆಗಿರುವ ರವಿಶಂಕರ್ ವಿರುದ್ಧ ರೇಪ್ ಕೇಸ್ ದಾಖಲು ಆಗಿದ್ದು, ತನಿಖೆ ಚುರುಕು ಪಡೆದಿದೆ.
ದೂರು ಕೊಟ್ಟ ಯುವತಿ ನೀಡಿದ ಸಾಕ್ಷ್ಯ ಕಂಡು ಸ್ವತಃ ಧಾರವಾಡದ ಉಪನಗರ ಠಾಣೆ ಪೊಲೀಸರು ಸುಸ್ತು ಹೊಡೆದು,
ಬೆಚ್ಚಿ ಬಿದ್ದಿದ್ದಾರೆ.
ರೇಪ್ ಕೇಸ್ ದಾಖಲಾದ್ರು, ಇಷ್ಟು
ದಿನ ಪ್ರಕರಣ ಮುಚ್ಚಿಟ್ಟಿದ್ದು ಯಾಕೆ..? ಎಂಬ ಅನುಮಾನ ಇದೀಗ ಎಲ್ಲರಿಗೂ ಕಾಡುತ್ತಿದೆ.
ಫೇಸ್ಬುಕ್ ಮೂಲಕ ರವಿಶಂಕರ್ಗೆ ಯುವತಿಯ ಪರಿಚಯವಾಗಿದೆ.
ಧಾರವಾಡದ ಅರಣ್ಯ ಇಲಾಖೆ ಕ್ವಾರ್ಟ್ರಸ್ಗೆ ಯುವತಿ ಕರೆಸಿಕೊಂಡು ದೈಹಿಕವಾಗಿ ಬಳಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ಯುವತಿ ಆಪಾದಿಸಿದ್ದಾಳೆ.
ಇನ್ಮುಂದೆ ನಾವು ಗಂಡ-ಹೆಂಡ್ತಿ ಎಂದು ರವಿಶಂಕರ್ ಹೇಳಿದ್ರಂತೆ ಎಂದು ವಿವರಿಸಿದ್ದಾಳೆ.
ಹೀಗಾಗಿ ಧಾರವಾಡದಲ್ಲಿ ಅತ್ಯಾಚಾರ ನಡೆದ ಸ್ಥಳ ಮಹಜರ್ ನಡೆಸಿದ ಧಾರವಾಡದ ಉಪನಗರ ಪೊಲೀಸರು,
ವರ್ಷದ ನಂತರ ನಡೆದ ಸ್ಥಳ ಮಹಜರ್ ನಲ್ಲಿ ಪೊಲೀಸರಿಗೆ ಸಿಕ್ಕಿದೇನು?
ಅರಣ್ಯ ಅಧಿಕಾರಿಯ ಸರ್ಕಾರಿ ಬಂಗಲೆಯಲ್ಲಿ ನಡೆಯಿತಾ ಈ ಅತ್ಯಾಚಾರ? ಎಂಬ ಪ್ರಶ್ನೆ ಎದುರಾಗಿದೆ.
ಧಾರವಾಡದ ಅರಣ್ಯ ಇಲಾಖೆಯ ಬಂಗಲೆಯ ಬೆಡ್ ರೂಮ್ ತಡಕಾಡಿದ ಪೊಲೀಸರು ಎನೇನು ಶೋಧ ಮಾಡಿದ್ದಾರೆ ಎಂಬುದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.
ಶ್ರೀರಾಮನ ಮೇಲೆ ಆಣೆ ಮಾಡಿ ವಂಚನೆ ಮಾಡಿದ್ದಾಗಿ ನೋಂದ ಯುವತಿ ಆರೋಪ ಮಾಡಿದ್ದಾಳೆ.
2018ರಿಂದ 2020ರವರೆಗೂ ನನ್ನನ್ನ ದೈಹಿಕವಾಗಿ ಬಳಸಿಕೊಂಡ್ರು.
ರವಿಶಂಕರ್ ವಂಚನೆಗೆ ಫೋಟೋ ಸಾಕ್ಷಿ ನೀಡಿರುವ ಯುವತಿ
2019ರ ಅಕ್ಟೋಬರ್ರಲ್ಲೇ ದೆಹಲಿಯಲ್ಲಿ ದೂರು ನೀಡಿದ್ದಳು.
ದೆಹಲಿಯ ಚಾಲುಕ್ಯಪುರ ಠಾಣೆಯಿಂದ. ಘಟನೆ ನಡೆದ ಧಾರವಾಡಕ್ಕೆ ಕೇಸ್ ವರ್ಗಾವಣೆಗೊಂಡಿದೆ.
ಧಾರವಾಡದ ಉಪನಗರ ಠಾಣೆ ಪೊಲೀಸರಿಂದ ತನಿಖಾ ಕಾರ್ಯ ನಡೆಯುತ್ತಿದೆ.
2019ರ ಅಕ್ಟೋಬರ್ 6ರಂದೇ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್
ದಾಖಲಾಗಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಲೋಹಿತ್ ಎಂಬಾತ ದೂರು ನೀಡಿದ್ದಾನೆ.
ಲೋಹಿತ್ ದೂರು ಆಧರಿಸಿ ಯುವತಿಯನ್ನ ಬಂಧಿಸಿದ್ದ ಪೊಲೀಸರು
ಯುವತಿ ವಿರುದ್ಧ ಈ ರೀತಿ ಹಲವು ಆರೋಪಗಳು ಕೇಳಿಬಂದಿವೆ.
ಆದರೆ, ಇದೀಗ ಯುವತಿ ಸಿಸಿಎಫ್ ರವಿಶಂಕರ್ ಮೇಲೆ ಅತ್ಯಾಚಾರ ಐಪಿಸಿ 376 ಪ್ರಕರಣ, ನಂಬಿಸಿ ಮೋಸ, ವಂಚನೆ, ಐಪಿಸಿ 420 ಪ್ರಕರಣ ದಾಖಲಿಸಿರುವುದು ತೀವ್ರ ಸ್ವರೂಪದ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬುದು ಕಾದು ನೋಡಬೇಕು.