ಧಾರವಾಡದಲ್ಲಿ ರೌಡಿಶೀಟರ್ ನಿಂದ
ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ….!
ಧಾರವಾಡ prajakiran.com : ಧಾರವಾಡದಲ್ಲಿ ರೌಡಿಶೀಟರ್ ನೊಬ್ಬ
ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ನಡೆದಿದೆ.
ಧಾರವಾಡದ ದಾನು ನಗರದ ಯುವಕನ ಮೇಲೆ ಈ ಹಲ್ಲೆ ನಡೆಸಲಾಗಿದೆ.
ಮಾರಣಾಂತಿಕ ಹಲ್ಲೆ ಮಾಡಿ ರೌಡಿಶೀಟರ್ ಪರಾರಿಯಾಗಿದ್ದಾನೆ.
ಮನೆಗೆ ಊಟಕ್ಕೆ ಕರೆದು ಮಾರಕಾಸ್ರ್ರಗಳಿಂದ ಹೊಡೆದ ರೌಡಿಶೀಟರ್ ಈರಣ್ಣ ಪಟೇಲ್ ಎಂದು ಗೊತ್ತಾಗಿದೆ.
ಹೊಡೆದಿದ್ದಕ್ಕೆ ಈವರೆಗೆ ಕಾರಣ ತಿಳಿದು ಬಂದಿಲ್ಲ.
ಮಾರಾಕಾಸ್ತ್ರಗಳಿಂದ ಹಲ್ಲೆಗೊಂಡ ಗಾಯಾಳು ಭರತ ಪಟ್ಟಣಶಟ್ಟಿ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದಾಖಲು ಆಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹಲ್ಲೆ ಮಾಡಿದ ರೌಡಿಶೀಟರ್ ಈರಣ್ಣ ಪಟೇಲ್ ಹಾಗೂ ಘಟನೆ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.