ರಾಜ್ಯ

ಯಮನೂರು ಚಾಂಗದೇವರ ಜಾತ್ರೆಯಲ್ಲಿ ನೀರಿಗಾಗಿ ಭಕ್ತರ ಪರದಾಟ….!?

*ಯಮನೂರು ಚಾಂಗದೇವ ಜಾತ್ರೆಯಲ್ಲಿ ಭಕ್ತರ ಪರದಾಟ*

*ಶಾಸಕ ಎನ್. ಎಚ್.ಕೋನರಡ್ಡಿ ನಿರ್ಲಕ್ಷ್ಯ ಸರಿಯಲ್ಲ*

*ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಸಮಾಧಾನ*

ಹುಬ್ಬಳ್ಳಿ ಪ್ರಜಾಕಿರಣ. ಕಾಮ್ : ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಜಾತ್ರೆಗಳ ಪೈಕಿ ಒಂದಾಗಿರುವ ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದ ಚಾಂಗದೇವರ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪವಿತ್ರ ಸ್ನಾನಕ್ಕೆ ಬೆಣ್ಣೆಹಳ್ಳದಲ್ಲಿ ನೀರಿಲ್ಲದೆ ಪರದಾಟ ನಡೆಸಿದ್ದಾರೆ.

ಬೆಣ್ಣಿಹಳ್ಳದಲ್ಲಿ ನೀರಿಲ್ಲದ ಪರಿಣಾಮ ಇರುವ ಅಲ್ಪಸ್ವಲ್ಪ ನೀರಲ್ಲೇ ಚಾಂಗದೇವರ ಭಕ್ತಾದಿಗಳು ಸ್ನಾನ, ನೆಮ ಮುಗಿಸಿಕೊಳ್ಳುತ್ತಿದ್ದಾರೆ.

ಪ್ರತಿ ವರ್ಷ ಹೋಳಿಹುಣ್ಣಿಮೆ ಹಾಗೂ ಚಾಂಗದೇವರ ಜಾತ್ರೆಯ ವೇಳೆ ಮಲಪ್ರಭಾದಿಂದ ನೀರು ಬಿಡಲಾಗುತ್ತಿತ್ತು.

ಇದರಿಂದ ಬೆಣ್ಣಿಹಳ್ಳದಲ್ಲಿ ನೀರು ಇರುತ್ತಿತ್ತು. ಆದರೆ ಈ ವರ್ಷ ಮಲಪ್ರಭಾ ನದಿಯಿಂದ ನೀರು ಬಿಡುವ ಕೆಲಸಕ್ಕೆ ಹೋಗಿಲ್ಲ. ಇದರಿಂದಾಗಿ ಭಕ್ತರು ಸಮಸ್ಯೆ ಎದುರಿಸುವಂತಾಗಿದೆ.

ನವಲಗುಂದ ಶಾಸಕ ಎನ್. ಎಚ್.ಕೋನರಡ್ಡಿ ಈ ರೀತಿ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ.

ಇನ್ನಾದರೂ ಹಳ್ಳಕ್ಕೆ ನೀರು ಬಿಡುಗಡೆ ಮಾಡಿಸಬೇಕೆಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *