ರಾಜ್ಯದಲ್ಲಿ 6680 ಜನ ಬಿಡುಗಡೆ
ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 124 ಜನ ಸಾವನ್ನಪ್ಪಿದ್ದಾರೆ.
ಮತ್ತೆ ಹೊಸದಾಗಿ 7040 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2,26,966 ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 6680 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 141491 ಜನ ಗುಣಮುಖರಾಗಿದ್ದು, 81,512ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
692 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಭಾನುವಾರವೂ 124 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 3947 ಕ್ಕೆ ಏರಿಕೆಯಾದಂತಾಗಿದೆ.
ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಬೆಂಗಳೂರಿನಲ್ಲಿ 2131 ಬರೋಬ್ಬರಿ ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.
ಇನ್ನೂಳಿದಂತೆ ಮೈಸೂರು 620, ಬೆಳಗಾವಿ 478, ಬಳ್ಳಾರಿ 381, ಕಲಬುರಗಿ 285, ಧಾರವಾಡ 268, ಉಡುಪಿ 237, ಯಾದಗಿರಿ 236, ದಕ್ಷಿಣ ಕನ್ನಡ 229, ದಾವಣಗೆರೆ 218, ಕೊಪ್ಪಳ 211, ರಾಯಚೂರು 183, ತುಮಕೂರು, 169, ವಿಜಯಪುರ 158, ಬಾಗಲಕೋಟೆ 156, ಹಾಸನ 145, ಬೀದರ 119, ಚಿಕ್ಕಬಳ್ಳಾಪುರ 98, ಮಂಡ್ಯ 91, ಕೋಲಾರ 90, ಬೆಂಗಳೂರು ಗ್ರಾಮಾಂತರ 87, ಗದಗ 79, ಹಾವೇರಿ 76, ಚಿತ್ರದುರ್ಗ 71, ಚಿಕ್ಕಮಗಳೂರು 69, ಉತ್ತರಕನ್ನಡ 61, ಚಾಮರಾಜನಗರ 36, ರಾಮನಗರ 32, ಕೊಡಗು 25, ಶಿವಮೊಗ್ಗ 1 ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಭಾನುವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 49 ಜನ ಸಾವನ್ನಪ್ಪಿದ್ದಾರೆ.
ಮೈಸೂರು 10, ಬಳ್ಳಾರಿ 9, ದಕ್ಷಿಣಕನ್ನಡ 7, ಧಾರವಾಡ 5, ಚಿಕ್ಕಮಗಳೂರು 4, ಮಂಡ್ಯ, ವಿಜಯಪುರ,ರಾಯಚೂರು, ಕೊಪ್ಪಳ, ದಾವಣಗೆರೆ, ಯಾದಗಿರಿ ಹಾಗೂ ಬೆಳಗಾವಿ ತಲಾ 3, ಕಲಬುರಗಿ, ಹಾಸನ, ಗದಗ, ಹಾವೇರಿ, ಉತ್ತರಕನ್ನಡ ಹಾಗೂ ಶಿವಮೊಗ್ಗ ತಲಾ 2, ಬೀದರ, ಚಿಕ್ಕಬಳ್ಳಾಪುರ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.