ಧಾರವಾಡ prajakiran.com : ಅಬಕಾರಿ ಇಲಾಖೆಯಿಂದ ಮಹಾನಗರ ಪಾಲಿಕೆ ಚುನಾವಣೆ ವೇಳೆಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಅವಳಿ ನಗರ ವ್ಯಾಪ್ತಿಯಲ್ಲಿ ಆ.16 ರಿಂದ 26 ರ ವರೆಗೆ ಒಟ್ಟು 74 ಪ್ರಕರಣಗಳನ್ನು ದಾಖಲಿಸಲಾಗಿದೆ.
ಧಾರವಾಡದಲ್ಲಿ ಕೈಗೊಂಡ 13 ಅಬಕಾರಿ ದಾಳಿಯಲ್ಲಿ 1 ಘೋರ, 1 ಬಿ.ಎಲ್.ಸಿ. ಮತ್ತು 15 ಎ ಅಡಿಯಲ್ಲಿ 5 ಸೇರಿ ಒಟ್ಟು 7 ಪ್ರಕರಣ 6 ಜನರ ಮೇಲೆ ಕೇಸ್ ದಾಖಲಿಸಲಾಗಿದೆ.
1,458 ಲೀ. ಮಧ್ಯ, ಒಂದು ವಾಹನ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 30,662 ಇದರ ಮೌಲ್ಯವಾಗಿದೆ.
ಅದರಂತೆ, ಹುಬ್ಬಳ್ಳಿ ಕೈಗೊಂಡ 61 ಅಬಕಾರಿ ದಾಳಿಯಲ್ಲಿ 3 ಘೋರ, 1 ಬಿ.ಎಲ್.ಸಿ. ಮತ್ತು 15 ಎ ಅಡಿಯಲ್ಲಿ 10 ಸೇರಿ ಒಟ್ಟು 14 ಪ್ರಕರಣ 10 ಜನರ ಮೇಲೆ ಕೇಸ್ ದಾಖಲಿಸಲಾಗಿದೆ.
27,234 ಲೀ. ಮಧ್ಯ, ಮೂರು ವಾಹನ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 90,819 ಇದರ ಮೌಲ್ಯವಾಗಿದೆ.
ಒಟ್ಟು 1,21,481 ರೂ.ಗಳ ಮೌಲ್ಯದ ವಾಹನ, ಮಧ್ಯ ವಶಪಡಿಸಿಕೊಂಡು 74 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.