ಹುಬ್ಬಳ್ಳಿ prajakiran.com : ಬೆಣ್ಣೆಹಳ್ಳ ದಾಟುತ್ತಿದ್ದ ಇಬ್ಬರು ನೀರಿನ ಸೆಳವಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದ ಬಳಿಭಾನುವಾರ ಸಂಜೆ ಸಂಭವಿಸಿದೆ.
ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಶ್ರೀಕಾಂತ ವೆಂಕರಡ್ಡಿ ಇನಾಮತಿ (65), ದೇವೇಂದ್ರಪ್ಪ ಮಾದರ (55) ಎಂಬುವರೇ ಮೃತ ದುರ್ದೈವಿಗಳು.
ಇವರು ಹೆಬಸೂರಿನಿಂದ ಬಲ್ಲರವಾಡ ಗ್ರಾಮಕ್ಕೆ ಒಳರಸ್ತೆ ಮಾರ್ಗವಾಗಿ ಹೋಗುತ್ತಿದ್ದರು. ಈ ವೇಳೆ ಬೆಣ್ಣೆಹಳ್ಳ ದಾಟುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸ್ಥಳೀಯರು ಮತ್ತು ಪೊಲೀಸರು ಒಂದು ಗಂಟೆಗೂ ಅಧಿಕಕಾಲ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.
ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.