ಹುಬ್ಬಳ್ಳಿ prajakiran.com : ರಸ್ತೆಯಲ್ಲಿ ನಿಂತಿದ್ದಕ್ಕೆ ಐದನೂರು ರೂ. ದಂಡ ಕಟ್ಟು ಎಂದು ಪೊಲೀಸರ ಸೋಗಿನಲ್ಲಿ ಖದೀಮನೊಬ್ಬ ಕೇಳಿದ್ದಾನೆ.
ಆತ ನಾನೇನು ತಪ್ಪು ಮಾಡಿಲ್ಲ. ದಂಡ ಯಾವುದಕ್ಕೆ ಕಟ್ಟಬೇಕು ಎಂದು ಹೇಳಿದ್ದಾನೆ. ಆಗ ದಂಡ ಕಟ್ಟಲಾಗದಿದ್ದರೇ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಗೆ ಬಂದು ದಂಡ ಕಟ್ಟಿ ಬೈಕ್ ಬಿಡಿಸಿಕೋ ಎಂದು ಹೇಳಿ ಬೈಕ್ ತೆಗೆದುಕೊಂಡು ಹೋಗಿದ್ದಾನೆ.
ಆದರೆ ನಂತರ ಠಾಣೆಗೆ ಹೋಗಿ ವಿಚಾರಣೆ ಮಾಡಿದರೆ, ಅಲ್ಲಿಗೆ ಯಾವುದೇ ಬೈಕ್ ಪೊಲೀಸ್ ಠಾಣೆಗೆ ಬಂದಿಲ್ಲ. ನಮ್ಮ ಸಿಬ್ಬಂದಿಯೂ ಆ ಕೆಲಸ ಮಾಡಿಲ್ಲ ಎಂದು ಪೊಲೀಸರು ಹೇಳಿ ಕೈ ತೊಳೆದುಕೊಂಡಿದ್ದಾರೆ.
ಅಲ್ಲದೆ, ಹುಬ್ಬಳ್ಳಿ ಪೊಲೀಸ್ ಹೆಸರಿನಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ತೆಗೆದುಕೊಂಡು ಹೋದ ಖತರ್ ನಾಕ್ ಖದೀಮ ಯಾರು ಎಂದು ಸ್ವತಃ ಪೊಲೀಸರೇ ದಂಗಾಗಿದ್ದಾರೆ.
ನಗರದ ಕೃಷ್ಣ ಕಲ್ಯಾಣ ಮಂಟಪದ ರಸ್ತೆ ಬದಿ ನಿಂತಿದ್ದ ಯುವಕನಿಗೆ ಹಾಡಹಗಲೇ ಪೊಲೀಸ್ ಹೆಸರಿನಲ್ಲಿ ವಂಚಿಸಿ ರಾಯಲ್ ಎನ್ಫೀಲ್ಡ್ನೊಂದಿಗೆ ಪರಾರಿಯಾಗಿರುವ ವ್ಯಕ್ತಿ ವಿರುದ್ದ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಪತ್ತೆ ಕಾರ್ಯ ಮುಂದುವರೆದಿದೆ.