ರಾಜ್ಯ

ಬೆಳಗ್ಗೆ 100, ಸಂಜೆ ಕೇವಲ 1 ಕರೋನಾ ಕೇಸ್ : ನೆಮ್ಮದಿಯ ನಿಟ್ಟುಸಿರು ಬಿಟ್ಟ ಕರುನಾಡು

ಬೆಂಗಳೂರು prajakiran.com : ಬೆಳಗ್ಗೆ ಬರೋಬ್ಬರಿ 100 ಕೇಸ್ ಪತ್ತೆಯಾಗುವ ಮೂಲಕ ರಾಜ್ಯದ ಜನತೆಯನ್ನು ಬೆಚ್ಚಿಬಿಳಿಸಿದ್ದ ಕರೋನಾ ವೈರಸ್ ಸಂಜೆ ವೇಳೆಗೆ ಒಂದು ಪ್ರಕರಣ ಬೆಳಕಿಗೆ ಬರುವ ಮೂಲಕ ಕರುನಾಡನ್ನು ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಸಂಜೆ ವೇಳೆಗೆ ವಿಜಯಪುರ ಜಿಲ್ಲೆಯ ಒಂದು ಪ್ರಕರಣ ಖಚಿತಗೊಂಡಿದೆ. ಆ ಮೂಲಕ ಮಂಗಳವಾರ ವಿಜಯಪುರದಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಐವರಿಗೆ ಪತ್ತೆಯಾಗಿತ್ತು. ರಾಜ್ಯದ ಪಾಸಿಟಿವ್ ಕೇಸ್ ಸಂಖ್ಯೆ 101 ಕ್ಕೆ ಏರಿದೆ.  

ಕೋಟೆ ನಾಡು ಚಿತ್ರದುರ್ಗದಲ್ಲಿ ಇವತ್ತು ಒಂದೇ ದಿನ 20 ಸೋಂಕಿತರು ಪತ್ತೆಯಾಗಿದ್ದಾರೆ. ಇವರೆಲ್ಲರೂ ತಮಿಳುನಾಡಿನಿಂದ ಬಂದವರಾಗಿದ್ದಾರೆ. ಇವರಿಗೆ ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅದೇ ರೀತಿ ಹಾಸನ ಜಿಲ್ಲೆಯ 13 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅವರಿಗೆ ಹಾಸನದ ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ 13 ಜನರು ಜಾರ್ಖಂಡ ರಾಜ್ಯದಿಂದ ಬಂದವರಾಗಿದ್ದು, ಅವರಿಗೆ ಬಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೀದರ 10, ಯಾದಗಿರಿ 14 ಸೋಂಕಿತರು ಮಹಾರಾಷ್ಟ್ರ ನಂಟು ಹೊಂದಿದ್ದಾರೆ. ಇವತ್ತು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ 11, ರಾಜ್ಯದ ರಾಜಧಾನಿ ಬೆಂಗಳೂರು 2, ಉಡುಪಿ 3, ಬಳ್ಳಾರಿ 1, ಕೊಪ್ಪಳ 1, ಚಿಕ್ಕಬಳ್ಳಾಪುರ 1, ದಕ್ಷಿಣ ಕನ್ನಡ 3, ಬಾಗಲಕೋಟೆ 1, ಕೋಲಾರ 2 ಪ್ರಕರಣ ದಾಖಲಾಗಿವೆ.

ರಾಜ್ಯದ ಸೋಂಕಿತರ ಸಂಖ್ಯೆ 2283 ಕ್ಕೆ ಏರಿಕೆ ಆಗಿದೆ. ಈವರೆಗೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ 44 ಜನ ಮಂದಿ ಬಲಿಯಾಗಿದ್ದಾರೆ.  

ದಾವಣಗೆರೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 125, ಬೀದರ 95, ವಿಜಯಪುರ 76, ಉಡುಪಿ 111, ದಕ್ಷಿಣ ಕನ್ನಡ 65, ಕೋಲಾರ 18, ಬಾಗಲಕೋಟೆ 78, ಚಿಕ್ಕಬಳ್ಳಾಪುರ 127ಕ್ಕೆ ಏರಿದಂತಾಗಿದೆ.   

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *