ಬೆಳಗಾವಿ prajakiran.com : ಬೀರದೇವರ ದೇವಾಲಯಕ್ಕೆ ಕನ್ನ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ರಾಮದುರ್ಗ ತಾಲೂಕಿನ ಸಿದ್ನಾಳ ಗ್ರಾಮದಲ್ಲಿಯೇ ಈ ದುಷ್ಕೃತ್ಯ ನಡೆದಿದೆ.
ಬೀರ ದೇವರ ಬೆಳ್ಳಿಯ ವಿಗ್ರಹ ಸೇರಿ ಅನೇಕ ಆಭರಣ ಕಳ್ಳತನವಾಗಿವೆ.
30 ಕೆ.ಜಿ. ಬೆಳ್ಳಿ ಹಾಗೂ 25 ಗ್ರಾಂ ಬಂಗಾರ ಕಳ್ಳರ ಪಾಲಾಗಿದೆ.
ಮಾಹಿತಿ ಅರಿತು ಘಟನಾ
ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಹಾಗೂ ಸಿಪಿಐ
ಭೇಟಿ ನೀಡಿ , ಪರಿಶೀಲನೆ ನಡೆಸಿದರು.
ಈ ಕುರಿತು ಪ್ರಕರಣ ದಾಖಲಿಸಿಕೊಂದ ಪೊಲೀಸರು ಖದೀಮರ ಬಂಧನಕ್ಕೆ ಜಾಲ ಬೀಸಿದ್ದಾರೆ.