ರಾಮನಗರ prajakiran.com : ಕೊನೆಗೂ ಗ್ರೀನ್ ಜೋನ್ ನಲ್ಲಿದ್ದ ರಾಮನಗರಕ್ಕೆ ಕರೋನಾ ಕಂಟಕ ವಕ್ಕರಿಸಿದೆ. ಮಾಗಡಿ ತಾಲೂಕಿನ ಗ್ರಾಮವೊಂದರ ಎರಡು ವರ್ಷದ ಮಗುವಿಗೆ ಕರೋನಾ ಸೋಂಕು ತಗುಲಿದೆ.
ಇವರ ತಂದೆ ತಾಯಿಗೆ ವರದಿ ನೆಗೇಟಿವ್ ಬಂದರೆ ಮಗುವಿಗೆ ಮಾತ್ರ ಪಾಸಿಟಿವ್ ಬಂದಿದೆ. ಆ ಮೂಲಕ ರಾಮನಗರ ಜಿಲ್ಲೆಯ ಜನತೆಯ ನೆಮ್ಮದಿಯೂ ಭಂಗವಾಗಿದೆ.
ಇವರ ತಂದೆ ತಾಯಿ ಚೈನ್ನೈನಿಂದ ರಾಮನಗರಕ್ಕೆ ಬಂದಿದ್ದರು. ಇದೀಗ ರಾಮನಗರಕ್ಕೆ ಚೈನ್ನೈ ಕಂಟಕ ತಗುಲಿದೆ.
ಈ ಹಿಂದೆ ರಾಮನಗರ ಜಿಲ್ಲೆಯ ಕೆಲವರನ್ನು ಕೇಂದ್ರ ಕಾರಾಗೃಹಕ್ಕೆ ಪಾದರಾಯನಪುರ ಕಂಟಕ ತಗುಲಿದ್ದರೂ, ತಕ್ಷಣ ಅವರನ್ನು ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಇಷ್ಟು ದಿನಗಳ ವರೆಗೆ ನೆಮ್ಮದಿಯಲ್ಲಿದ್ದ ರಾಮನಗರ ಜನತೆಗೆ ಇದೀಗ ಸಂಕಟ ಎದುರಾಗಿದೆ.