ಹುಬ್ಬಳ್ಳಿ prajakiran.com : ಹುಬ್ಬಳ್ಳಿ ನವನಗರ ಪೊಲೀಸರು ಹಾಗೂ ವಕೀಲರ ನಡುವಿನ ಗುದ್ದಾಟವೀಗ ಮತ್ತಷ್ಟು ತಾರಕಕ್ಕೇ ಹೋಗುವ ಸಾಧ್ಯತೆ ಇದೆ.
ನವನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ಒಬ್ಬರು ವಕೀಲ ವಿನೋದ ಪಾಟೀಲ ಬಂಧನ ಮಾಡಿದ್ದಾರೆ ಎಂಬ ಕಾರಣಕ್ಕೆ ಪೊಲೀಸನನ್ನು ಅಮಾನತು ಮಾಡಲಾಗಿದೆ.
ನವನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಭು ಸೂರಿನ್ ದೂರು ದಾಖಲಿಸಿದ್ದ ಪ್ರಕರಣದಲ್ಲಿ ವಕೀಲ ವಿನೋದ ಪಾಟೀಲ ಮೇಲೆ ಕರ್ತವ್ಯಕ್ಕೆ ಅಡ್ಡಿ
ಪ್ರಕರಣ ದಾಖಲು ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಈ ಸಮಯದಲ್ಲಿ ವಕೀಲ ವಿನೋದ ಪಾಟೀಲರಿಗೆ ಕೈಗೆ ಬೇಡಿ ಹಾಕಲಾಗಿದ್ದ ಪ್ರಕರಣ ಬೇರೆ ಸ್ವರೂಪವನ್ನೇ ಪಡೆದಿದೆ.
ವಕೀಲ ವಿನೋದ ಪಾಟೀಲರ ಪರವಾಗಿ ವಕೀಲರು ಬೀದಿಗಿಳಿದು ಹೋರಾಟ ಮಾಡಿ, ಕೈಗೆ ಬೇಡಿ ಹಾಕಿರುವುದನ್ನ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ದೂರು ನೀಡಿ, ಇನ್ಸಪೆಕ್ಟರ್ ಪ್ರಭು ಸೂರಿನ್ ಮೇಲೆ ಕ್ರಮವನ್ನ ಜರುಗಿಸುವಂತೆ ಆಗ್ರಹಿಸಿದ್ದರು.
ಇದೇ ಪ್ರಕರಣದಲ್ಲಿ ವಕೀಲರು ಹಾಗೂ ಪೊಲೀಸರ ನಡುವೆ ಗುದ್ದಾಟ ಸಹ ಆರಂಭವಾಗಿದ್ದು, ಪೊಲೀಸ್ ಕಾನ್ಸಟೇಬಲ್ ಸಂತೋಷಕುಮಾರ ಕಾಳೆ ಎಂಬಾತರನ್ನ ಅಮಾನತ್ತು ಮಾಡಿ, ಆದೇಶ ಹೊರಡಿಸಲಾಗಿದೆ.