ರಾಜ್ಯ

ಹುಬ್ಬಳ್ಳಿ ಪೊಲೀಸರು-ವಕೀಲರ ನಡುವೆ ಗಲಾಟೆ ಪ್ರಕರಣ : ಕಾನ್ಸಟೇಬಲ್ ಅಮಾನತು

ಹುಬ್ಬಳ್ಳಿ prajakiran.com : ಹುಬ್ಬಳ್ಳಿ ನವನಗರ ಪೊಲೀಸರು ಹಾಗೂ ವಕೀಲರ ನಡುವಿನ ಗುದ್ದಾಟವೀಗ ಮತ್ತಷ್ಟು ತಾರಕಕ್ಕೇ ಹೋಗುವ ಸಾಧ್ಯತೆ ಇದೆ.

ನವನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸಟೇಬಲ್ ಒಬ್ಬರು ವಕೀಲ ವಿನೋದ ಪಾಟೀಲ ಬಂಧನ ಮಾಡಿದ್ದಾರೆ ಎಂಬ ಕಾರಣಕ್ಕೆ ಪೊಲೀಸನನ್ನು ಅಮಾನತು ಮಾಡಲಾಗಿದೆ.

ನವನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಪ್ರಭು ಸೂರಿನ್ ದೂರು ದಾಖಲಿಸಿದ್ದ ಪ್ರಕರಣದಲ್ಲಿ ವಕೀಲ ವಿನೋದ ಪಾಟೀಲ ಮೇಲೆ ಕರ್ತವ್ಯಕ್ಕೆ ಅಡ್ಡಿ
ಪ್ರಕರಣ ದಾಖಲು ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಈ ಸಮಯದಲ್ಲಿ ವಕೀಲ ವಿನೋದ ಪಾಟೀಲರಿಗೆ ಕೈಗೆ ಬೇಡಿ ಹಾಕಲಾಗಿದ್ದ ಪ್ರಕರಣ ಬೇರೆ ಸ್ವರೂಪವನ್ನೇ ಪಡೆದಿದೆ.

ವಕೀಲ ವಿನೋದ ಪಾಟೀಲರ ಪರವಾಗಿ ವಕೀಲರು ಬೀದಿಗಿಳಿದು ಹೋರಾಟ ಮಾಡಿ, ಕೈಗೆ ಬೇಡಿ ಹಾಕಿರುವುದನ್ನ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ದೂರು ನೀಡಿ, ಇನ್ಸಪೆಕ್ಟರ್ ಪ್ರಭು ಸೂರಿನ್ ಮೇಲೆ ಕ್ರಮವನ್ನ ಜರುಗಿಸುವಂತೆ ಆಗ್ರಹಿಸಿದ್ದರು.

ಇದೇ ಪ್ರಕರಣದಲ್ಲಿ ವಕೀಲರು ಹಾಗೂ ಪೊಲೀಸರ ನಡುವೆ ಗುದ್ದಾಟ ಸಹ ಆರಂಭವಾಗಿದ್ದು, ಪೊಲೀಸ್ ಕಾನ್ಸಟೇಬಲ್ ಸಂತೋಷಕುಮಾರ ಕಾಳೆ ಎಂಬಾತರನ್ನ ಅಮಾನತ್ತು ಮಾಡಿ, ಆದೇಶ ಹೊರಡಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *