ಧಾರವಾಡ prajakiran.com : ಉತ್ತರ ಕರ್ನಾಟಕ ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಮೇಲೆ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ನಿಂದ ದೌರ್ಜನ್ಯ ವೆಸಗಿರುವುದನ್ನು ಖಂಡಿಸಿ ಧಾರವಾಡದಲ್ಲಿ ಸೋಮವಾರ ಉತ್ತರ ಕರ್ನಾಟಕ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಹುಬ್ಬಳ್ಳಿ ಧಾರವಾಡ ಮಾಲೀಕರು ಮತ್ತು ಚಾಲಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಟ್ಯಾಕ್ಸಿ ಡ್ರೈವರ್ಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ದೇಶದಲ್ಲಿ ಕೊರೊನಾ ಮಹಾಮಾರಿಯಿಂದ ಉತ್ತರ ಕರ್ನಾಟಕದ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದರ ಮಧ್ಯ ಈಗ ಕೊವೀಡ್ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಧರ್ಮ ಕ್ಷೇತ್ರಗಳು ಬಾಡಿಗೆಗಳು ಬರುತ್ತಿವೆ. ಹಾಗೇ ಬಾಡಿಗೆಗೆ ಹೋದ ವಾಹನ ಚಾಲಕರ ಮತ್ತು ಮಾಲೀಕರ ಮೇಲೆ ಧರ್ಮಸ್ಥಳ, ಕುಂದಾಪುರ ಹಾಗೂ ಉಡುಪಿಯ ಟ್ಯಾಕ್ಸಿ ಚಾಲಕರು ಸುಖಾಸುಮ್ಮನೆ ದೌರ್ಜನ್ಯ ನಡೆಸಿ, ದೂರುಗಳನ್ನು ದಾಖಲು ಮಾಡುತ್ತಿದ್ದಾರೆ.
ಸ್ಥಳಿಯ ಆರ್ ಟಿ ಓ ಅಧಿಕಾರಿಗಳಿಂದ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದರು.
ಕೂಡಲೇ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ವಿರುದ್ಧ ಕ್ರಮ ಕೈಗೊಂಡು, ಆರ್ ಟಿ ಒ ಅಧಿಕಾರಿಗಳ ಮಾನಸಿಕ ಕಿರಿಕಿರಿ ನಿಲ್ಲಿಸಬೇಕು ಎಂದರು.