ರಾಜ್ಯ

ಧಾರವಾಡ : ಬಸ್ ಗೆ ಕಲ್ಲು ಹೊಡೆದು, ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದವನಿಗೆ 2 ವರ್ಷ 6 ತಿಂಗಳು ಜೈಲು

ಧಾರವಾಡ ಪ್ರಜಾಕಿರಣ.ಕಾಮ್ : 2016ರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೃಷಿ ವಿಶ್ವವಿದ್ಯಾಲಯದತ್ತ ಸಂಚರಿಸುತ್ತಿದ್ದ ಬಸ್ ಗೆ ಕಲ್ಲು ಹೊಡೆದು, ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದವನಿಗೆ 2 ವರ್ಷ 6 ತಿಂಗಳು ಜೈಲುಶಿಕ್ಷೆ ವಿಧಿಸಿ ಧಾರವಾಡ ಜಿಲ್ಲೆಯ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ‌.

ಧಾರವಾಡದ ಉಪನಗರ ಪೊಲೀಸ ಠಾಣೆ ಗುನ್ನಾ ನಂಬರ : 50/2016.
ಕಲಂ : 353, 332,504 IPC ನೇದ್ದತಲ್ಲಿ ಆರೋಪಿತನಾದ ಪುಂಡಲಿಕ ಲಕ್ಷ್ಮಣ ಮೊರಬ. ಸಾ: ಎತ್ತಿನಗುಡ್ಡ ಧಾರವಾಡ. ಇತನು‌ ಅಪರಾಧ ಎಸಗಿದ‌ ಬಗ್ಗೆ‌‌‌ ಆರೋಪ ಸಾಬೀತಾಗಿದೆ.

ಧಾರವಾಡದ ಪ್ರಧಾನ‌ ಸಿ.ಜೆ ಮತ್ತು‌ ಜೆ.ಎಮ್.ಎಫ್.ಸಿ‌ ನ್ಯಾಯಾಲಯದ‌ ನ್ಯಾಯಾಧೀಶರಾದ ಗಿರಿಶ ಆರ್.ಬಿ‌ ಅವರು‌ ಅಪರಾಧಿಗೆ ಕಲಂ:
353 IPC ಪ್ರಕಾರ ಒಂದು‌ ವರ್ಷ ಸಾದಾ ಶಿಕ್ಷೆ ಮತ್ತು 2000/- ದಂಡ.
ಕಲಂ: 332 IPC ಪ್ರಕಾರ ಒಂದು‌ ವರ್ಷ ಸಾದಾ ಶಿಕ್ಷೆ ಮತ್ತು 2000/- ದಂಡ ಮತ್ತು ಕಲಂ: 504 IPC ಪ್ರಕಾರ ಆರು‌ ತಿಂಗಳು‌‌ ಸಾದಾ ಶಿಕ್ಷೆ‌ ಮತ್ತು 1000/- ದಂಡ ವಿಧಿಸಿ,
ಎಲ್ಲಾ ಶಿಕ್ಷೆಗಳನ್ನು ಏಕ ಕಾಲಕ್ಕೆ ಜಾರಿಗೊಳಿಸುವಂತೆ‌ ಆದೇಶಿಸಿರುತ್ತಾರೆ.

ಸರ್ಕಾರದ ಪರವಾಗಿ ಶ್ರೀಮತಿ ಸವಿತಾ ಹಾನಗಲ್ ವಾದ ಮಂಡಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *