ಧಾರವಾಡ ಪ್ರಜಾಕಿರಣ.ಕಾಮ್ : 2016ರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೃಷಿ ವಿಶ್ವವಿದ್ಯಾಲಯದತ್ತ ಸಂಚರಿಸುತ್ತಿದ್ದ ಬಸ್ ಗೆ ಕಲ್ಲು ಹೊಡೆದು, ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದವನಿಗೆ 2 ವರ್ಷ 6 ತಿಂಗಳು ಜೈಲುಶಿಕ್ಷೆ ವಿಧಿಸಿ ಧಾರವಾಡ ಜಿಲ್ಲೆಯ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ.
ಧಾರವಾಡದ ಉಪನಗರ ಪೊಲೀಸ ಠಾಣೆ ಗುನ್ನಾ ನಂಬರ : 50/2016.
ಕಲಂ : 353, 332,504 IPC ನೇದ್ದತಲ್ಲಿ ಆರೋಪಿತನಾದ ಪುಂಡಲಿಕ ಲಕ್ಷ್ಮಣ ಮೊರಬ. ಸಾ: ಎತ್ತಿನಗುಡ್ಡ ಧಾರವಾಡ. ಇತನು ಅಪರಾಧ ಎಸಗಿದ ಬಗ್ಗೆ ಆರೋಪ ಸಾಬೀತಾಗಿದೆ.
ಧಾರವಾಡದ ಪ್ರಧಾನ ಸಿ.ಜೆ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗಿರಿಶ ಆರ್.ಬಿ ಅವರು ಅಪರಾಧಿಗೆ ಕಲಂ:
353 IPC ಪ್ರಕಾರ ಒಂದು ವರ್ಷ ಸಾದಾ ಶಿಕ್ಷೆ ಮತ್ತು 2000/- ದಂಡ.
ಕಲಂ: 332 IPC ಪ್ರಕಾರ ಒಂದು ವರ್ಷ ಸಾದಾ ಶಿಕ್ಷೆ ಮತ್ತು 2000/- ದಂಡ ಮತ್ತು ಕಲಂ: 504 IPC ಪ್ರಕಾರ ಆರು ತಿಂಗಳು ಸಾದಾ ಶಿಕ್ಷೆ ಮತ್ತು 1000/- ದಂಡ ವಿಧಿಸಿ,
ಎಲ್ಲಾ ಶಿಕ್ಷೆಗಳನ್ನು ಏಕ ಕಾಲಕ್ಕೆ ಜಾರಿಗೊಳಿಸುವಂತೆ ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ಶ್ರೀಮತಿ ಸವಿತಾ ಹಾನಗಲ್ ವಾದ ಮಂಡಿಸಿದ್ದರು.