ಧಾರವಾಡ prajakiran.com : ಅ.೨೮ರಂದು ನಡೆಯಲಿರುವ ಪಶ್ಚಿಮ ಪದವೀಧರರ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಬೂ ರಾಮ್ ಹೇಳಿದರು.
ಅವರು ಮಂಗಳವಾರ ನಗರದಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
3 ಜನ ಎಸಿಪಿ, 10 ಜನ ಇನಸ್ಪೆಕ್ಟರ್, 7 ಜನ ಪಿಎಸ್ಐ, 24 ಜನ ಎಎಸ್ಐ, 42 ಜನ ಹೆಡ್ ಕಾನ್ ಸ್ಟೇಬಲ್, 92 ಜನ ಕಾನ್ ಸ್ಟೇಬಲ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.