ಅಂತಾರಾಷ್ಟ್ರೀಯ

ನಿಷೇಧದ ಮಧ್ಯೆಯೂ ಅದ್ಧೂರಿಯಾಗಿ ನಡೆದ ಬಡಿಗೆ ಬಡಿದಾಟದ ಜಾತ್ರೆ

ಆಂಧ್ರ prajakiran.com : ನಿಷೇಧದ ಮಧ್ಯೆಯೂ ಬಡಿಗೆ ಬಡಿದಾಟದ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿರುವ ಆಂಧ್ರದ ಗಡಿಭಾಗದ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ  ದಸರಾ ಹಬ್ಬದಲ್ಲಿ ವಿಶೇಷ ಆಚರಣೆ ಅದ್ಧೂರಿಯಾಗಿ ನಡೆದಿದೆ. 

ಕೊರೋನಾ ಹಿನ್ನಲೆಯಲ್ಲಿ ಆಂಧ್ರ ಸರ್ಕಾರ ಹೆಚ್ಚು ಜನರು ಸೇರಿ ಬಡಿಗೆ ಜಾತ್ರೆ ಮಾಡದಂತೆ ಎಚ್ಚರಿಸಿತ್ತು.

ದಶಕಗಳಿಂದಲೂ ನಡೆದ ಈ ಜಾತ್ರೆಗೆ ಇದೀಗ ಕೊರೋನಾ ಹಿನ್ನಲೆಯಲ್ಲಿ ನಿಷೇಧ ಹೇರಲಾಗಿತ್ತು.

ಆದರೆ ಕೊರೋನಾಗೆ ಡೋಂಟ್ ಕೇರ್ ಎಂದು ಅದ್ಧೂರಿಯಾಗಿ ಜಾತ್ರೆ ಮಾಡಿ ಜನರು ಬಡಿದಾಡಿಕೊಂಡಿದ್ದಾರೆ.

ಸಾಮಾನ್ಯವಾಗಿ ಜಾತ್ರೆ ಹಬ್ಬ ಹರಿದಿನಗಳು ಅಂದ್ರೇ, ದೇವರ ಪೂಜೆ ಪುನಸ್ಕಾರ ಮಾಡಿ  ಸಂಭ್ರಮಾಚರಣೆ ಮಾಡ್ತಾರೆ.

ಆದ್ರೇ ಇಲ್ಲೊಂದು ಜಾತ್ರೆಯಲ್ಲಿ ದೇವರ ಮೂರ್ತಿಗಾಗಿ ಜನರು ಬಡಿದಾಡಿಕೊಳ್ಳುತ್ತಾರೆ.  ಅದು  ಕೂಡ ದೇವರಿಗಾಗಿ ಎನ್ನುವದು ವಿಶೇಷ.

ಈ ಆಚರಣೆ ರಕ್ತಚರಿತ್ರೆಯನ್ನೇ ಬರೆಯುತ್ತದೆ. ಇಲ್ಲಿ ದೇವರಿಗಾಗಿ ಬಡದಾಡ ನಡೆಯುತ್ತದೆ.

ದಸರಾ ಹಬ್ಬದ ದಿನ ಪೂಜೆ ಬಳಿಕ ರಾತ್ರಿ ಉತ್ಸವ ಮೂರ್ತಿ ಯನ್ನು ಹೊರಗೆ ತರಲಾಗುತ್ತದೆ.

ಆಗ ಅರಕೇರ ಮತ್ತು ನೇರಣಿಕಿ ಗ್ರಾಮಸ್ಥರು ದೇವರ ಉತ್ಸವ ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗ ಬೇಕೆಂದು ಬಡಿಗೆ ಹಿಡಿದು ಬಡಿದಾಡಿಕೊಳ್ಳುತ್ತಾರೆ.

ಯಾರು ದೇವರ ಮೂರ್ತಿ ಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗ್ತಾರೋ ಆ ಊರಿಗೆ ಒಳ್ಳೆಯದಾಗ್ತದೆ ಎನ್ನುವ ನಂಬಿಕೆ ಇದೆ.

ರಾತ್ರಿ 1 ಗಂಟೆ ಯಿಂದ ಬೆಳಿಗ್ಗೆ ನಾಲ್ಕು ಗಂಟೆಯವರೆಗೂ ನಡೆಯೋ ಜಾತ್ರೆ ನೋಡಲು ಮತ್ತು ಬಡಿದಾಡಿಕೊಳ್ಳಲು ಸಾವಿರಾರು ಭಕ್ತರು ಬರುತ್ತಾರೆ.

ಬಡಿದಾಟದಲ್ಲಿ ಈ ಬಾರಿಯೂ ಹಲವರಿಗೆ ಗಾಯಗಳಾಗಿದೆ. ಜನರ ಆಚರಣೆ ಮಧ್ಯೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *