ಹಸಿದ ಹೊಟ್ಟೆಗೆ ದುಡ್ಡಿಲ್ಲದಿದ್ದರೂ ಅನ್ನ ನೀಡಿದ್ದ ಪೌಲ್ ಮಾಮು
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಪೌಲ್ ಕ್ಯಾಂಟೀನ್ ಮಾಲೀಕರಾಗಿದ್ದ ಪೌಲ್ ಕಾರ್ಡೋಜಾ ಅವರು ಹೃದಯಾಘಾತ ದಿಂದ ಇಹಲೋಕವನ್ನು ತ್ಯಜಿಸಿದರು.
ಧಾರವಾಡದ ವಿದ್ಯಾಗಿರಿಗೂ ಪೌಲ್ ಮಾಮನ ಕ್ಯಾಂಟೀನ್ ಗೂ ಧಾರವಾಡ ಯುವಕರ ಜೊತೆಗೆ ಅವಿನಾಭಾವ ಸಂಬಂಧ.
ಅದರಲ್ಲೂ ಚಹಾ ಟಿಫನ್, ಊಟ ಹಾಗೂ ಟೈಂ ಪಾಸ್ ಮತ್ತು ಹುಡಗರ ಕಾರ್ಯಕ್ರಮ ಗಳಿಗೆ ಪ್ರಾಯೋಜಕತ್ವ ನೀಡುವ ಕಾಲೇಜು ಹುಡುಗರ ಖಾಯಂ ಅಡ್ಡಾ ಅಂತಲೇ ಫೇಮಸ್ ಆಗಿತ್ತು.
ಅಲ್ಲಿರುವ ಹುಡುಗರ ಬಳಿ ದುಡ್ಡು ಇರಲಿ ಬಿಡಲಿ ಟಿಫನ್, ಊಟಕ್ಕೆ ಮಾತ್ರ ಕೊರತೆ ಇರಲಿಲ್ಲ.
ಅಷ್ಟೊಂದು ಪ್ರೀತಿ ಸಲುಗೆಯ ದ್ಯೋತಕವಾಗಿ ಪೌಲ್ ಮಾಮು, ಪೌಲ್ ಅಂಕಲ್ ಪ್ರಖ್ಯಾತವಾಗಿದ್ದ.
ಅವರ ಅಗಲಿಕೆ ಧಾರವಾಡದ ಬಹುತೇಕ ಯುವಕರ ಪಾಲಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ನೂರಾರು ಜನ ಅವರೊಂದಿಗಿನ ಒಡನಾಟ ಸ್ಮರಿಸಿಕೊಂಡು ಕಂಬನಿ ಮಿಡಿದಿದ್ದಾರೆ.