ಒಂದು ಗಂಟೆಗೂ ಅಧಿಕ
ಗುರುವಿನ ಪಾದಪೂಜೆ ಮೂಲಕ ಗಮನ ಸೆಳೆದ ಸದ್ಭಕ್ತರು
ಸವದತ್ತಿಯ ಕುರುವಿನಕೊಪ್ಪದಲ್ಲಿ
ಅರ್ಥಪೂರ್ಣ ಗುರು ಪೂರ್ಣಿಮೆ ಆಚರಣೆ
ಸವದತ್ತಿ (ಬೆಳಗಾವಿ) ಪ್ರಜಾಕಿರಣ.ಕಾಮ್ : ಸವದತ್ತಿಯ ಕುರುವಿನಕೊಪ್ಪದಲ್ಲಿ ವೇದಮೂರ್ತಿ ಶಂಕ್ರಯ್ಯ ಅಜ್ಜನವರ ಸಾರಥ್ಯದಲ್ಲಿ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಲಬುರಗಿ ಜಿಲ್ಲೆಯ ಸೇಡಂನ
ಶಿವಶಂಕರ ಮಠದ ಷಟಷ್ಥಲ ಬ್ರಹ್ಮ ಶ್ರೀ
ಶಿವಶಂಕರ ಶಿವಾಚಾರ್ಯರು, ಹೂಲಿಯ ಷ.ಬ್ರ. ಶ್ರೀ ಶಿವಮಹಾಂತೇಶ ಶಿವಾಚಾರ್ಯರು, ನರೇಗಲ್ ನ ಮ.ಘ.ಚ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮೂಲಿಮಠ, ಸವದತ್ತಿ ಹಿರೇಮಠ ಶ್ರೀಗಳ ಪಾದಪೂಜೆಯನ್ನು
ಸದ್ಭಕ್ತರು ಒಂದು ಗಂಟೆಗೂ ಅಧಿಕ ಕಾಲ ಬಿಲ್ವ ಪತ್ರೆ, ವಿವಿಧ ಬಗೆಯ ಹೂಗಳ ರಾಶಿಯನ್ನೇ ಹರಿಸಿ ಧನ್ಯತಾಭಾವ ಮೆರದರು.
ಕರಿಕಟ್ಟಿಯ ಅಭಿಷೇಕ ಶಾಸ್ತ್ರಿಗಳು ಹಿರೇಮಠ ಅವರ ತಂಡದಿಂದ ವೇದ ಮಂತ್ರ ಪಠಣಗಳೊಂದಿಗೆ ಭಕ್ತಿ ಭಾವದಿಂದ ಗುರುಪೂರ್ಣಿಮೆ ವಿದ್ಯುಕ್ತವಾಗಿ ಸಮಾಪ್ತಿಗೊಂಡಿತು.
ನಾಡಿನ ವಿವಿಧ ಭಾಗಗಳಿಂದ ಹರಿದು ಬಂದಿದ್ದ ಭಕ್ತ ಸಮೂಹ
ಗುರುವಿನ ಶ್ರೀರಕ್ಷೆ ಪಡೆದರು.
ಈ ಪಾದಪೂಜೆಗೂ ಲೋಕ ಕಲ್ಯಾಣಕ್ಕಾಗಿ ತೋಟದ ಮನೆಯಲ್ಲಿ ನವಗ್ರಹ ಶಾಂತಿ ಹೋಮ ಹವನ
ನಡೆಯಿತು.