ಧಾರವಾಡ prajakiran.com : ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಮಠದ ಶರಣಮ್ಮ ಮಾತೋಶ್ರೀ ನೀಲಮ್ಮ ತಾಯಿ ಇಹಲೋಕ ತ್ಯಜಿಸಿದ್ದಾರೆ.
ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಪ್ರವಚನ ಮಾಡುವ ಮೂಲಕ ಜನರಿಗೆ ಭಕ್ತಿ ಮಾರ್ಗ, ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಶರಣಮ್ಮ ಮಾತೋಶ್ರೀ ನೀಲಮ್ಮ ತಾಯಿ ಭಕ್ತರಿಗೆ ಸಂದೇಶ ನೀಡಿದವರು.
ಅವರ ಅಗಲಿಕೆಯಿಂದ ಭಕ್ತ ಬಳಗ ದುಃಖದಲ್ಲಿ ಮುಳುಗಿದ್ದು, ಧಾರವಾಡದ ಕವಲಗೇರಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.