ಧಾರವಾಡ prajakiran. com ಜೂ.4:
24 ಕರ್ನಾಟಕ ಎನ್ ಸಿ ಸಿ ಶಿಬಿರ ದಿಂದ ಪುನೀತ್ ಸಾಗರ್ ಅಭಿಯಾನದ ಅಂಗವಾಗಿ ಕೆರೆಗಳ ಸ್ವಚ್ಛತೆ ಆರಂಭಿಸಲಾಗಿದೆ.
ಈ ಅಭಿಯಾನವು, ಮೇ30 ರಿಂದ ಪ್ರಾರಂಭಗೂಂಡು 5 ಜೂನ್ ರ ವರೆಗೆ ನಡೆಯಲಿದೆ.
ಶನಿವಾರ ಧಾರವಾಡದ ಸಾಧನ ಕೇರಿ ಹಾಗೂ ಕೆಲಗೇರಿ ಕೆರೆಯ ತ್ಯಾಜ್ಯ ವಸ್ತುಗಳನ್ನು ಹೂರತೆಗೆಯಲಾಯಿತು..
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಗೆ ಅನುಗುಣವಾಗಿ, NCC ಯು ಸಮುದ್ರ ತೀರ/ಕಡಲತೀರಗಳು/ಮತ್ತು ಇತರ ಜಲಮೂಲಗಳನ್ನು ಸ್ವಚ್ಛಗೊಳಿಸಲು ಪ್ಲ್ಯಾಸ್ಟಿಕ್/ಇತರ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕಲು ಸರೋವರಗಳನ್ನು ಒಳಗೊಂಡಿರುವ ರಾಷ್ಟ್ರವ್ಯಾಪಿ ಪ್ರಮುಖ ಅಭಿಯಾನ ‘ಪುನೀತ್ ಸಾಗರ್ ಅಭಿಯಾನ’ವನ್ನು ಆರಂಭಿಸಿದೆ.
ಧಾರವಾಡದ 24 ಕರ್ನಾಟಕ ಬಟಾಲಿಯನ್ ಧಾರವಾಡದಲ್ಲಿ 239 ಎನ್ಸಿಸಿ ಕೆಡೆಟ್ಗಳು, 8 ಎಎನ್ಒಗಳು, 6 ಪಿಐ ಸಿಬ್ಬಂದಿಗಳೊಂದಿಗೆ ಸಾಧನಕೇರಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಂಡರು
92 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ತೆಗೆದುಹಾಕಲಾಯಿತು.
ಈ ಸಂದರ್ಭದಲ್ಲಿ
ಕೆಡೆಟ್ಗಳು ಸ್ಥಳೀಯ ಜನರೊಂದಿಗೆ ಸಂವಹನ ನಡೆಸಿದರು ಮತ್ತು ಮಾಲಿನ್ಯ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಉತ್ಸಾಹಿ ಕೆಡೆಟ್ಗಳು ಮಾಲಿನ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಬ್ಯಾನರ್ಗಳೊಂದಿಗೆ ಘೋಷಣೆ ಜಾಥಾ ಕಾಯ೯ಕ್ರಮ ನಡೆಸಿದರು.
ಲೆಫ್ಟಿನೆಂಟ್ ಕರ್ನಲ್ A K ವೈದ್ಯ, ಕಮಾಂಡಿಂಗ್ ಆಫೀಸರ್ ಮತ್ತು ಧಾರವಾಡದ ಎನ್ ಸಿ ಸಿ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.