ಸ್ಥಳೀಯರ ಪ್ರತಿಭಟನೆ*
ಧಾರವಾಡ ಪ್ರಜಾಕಿರಣ.ಕಾಮ್ : ಕುಡಿಯುವ ನೀರಿನಲ್ಲಿ ಹುಳಗಳು ಹಾಗೂ ಕೊಳಚೆ ಮಿಶ್ರಿತ ನೀರು ಬರುತ್ತಿದೆ ಎಂದು ಧಾರವಾಡದ ಮದಾರಮಡ್ಡಿ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಬಂದರೂ ಅದರಲ್ಲಿ ಹುಳಗಳು ಬರುತ್ತಿದ್ದು, ಚಿಕ್ಕ ಮಕ್ಕಳಿಗೆ ಕಾಯಿಲೆಗಳು ಬರುತ್ತಿವೆ.
ಈ ಕುರಿತು ಮಹಾನಗರ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಧಿಕ್ಕಾರ ಕೂಗುತ್ತಾ ಅಸಮಾಧಾನ ವ್ಯಕ್ತಪಡಿಸಿದರು
ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಖಾಲಿ ಕೊಡಗಳನ್ನು ಹಿಡಿದು ಮಹಾನಗರ ಪಾಲಿಕೆಗೆ ಹಾಗೂ ಎಲ್ ಆಂಡ್ ಟಿ ಕಂಪೆನಿಗೆ ಹಿಡಿಶಾಪ ಹಾಕಿದರು.