*ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ ಜೋಶಿ ಬದಲಿಸಲು ಮಠಾಧೀಶರ ಹಕ್ಕೊತ್ತಾಯ*
*ಮಾ.31 ರವರೆಗೆ ಗಡುವು, ಏ. 2 ರಂದು ಮುಂದಿನ ನಿರ್ಧಾರ*
ಹುಬ್ಬಳ್ಳಿ ಪ್ರಜಾಕಿರಣ. ಕಾಮ್ :
ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಬದಲಿಸಲು ನಾಡಿನ ಹಲವಾರು ಮಠಾಧೀಶರ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬುಧವಾರ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಡೆದ ಮಠಾಧಿಪತಿಗಳ ಚಿಂತನ ಮಂಥನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರು ತಿಳಿಸಿದರು.
ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಈ ಸಭೆಯಲ್ಲಿ ನೂರಾರು ಮಠಾಧಿಪತಿಗಳು ಪಾಲ್ಗೊಂಡಿದ್ದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನಡೆ, ನುಡಿ ಬದಲಾಗಿದೆ. ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಅವರಿಗೆ ಸಮಷ್ಟಿ ಪ್ರಜ್ಞೆ ಬೇಕಾಗಿದೆ.
ಅವರಿಂದಾಗಿ ನಮ್ಮ ಲಿಂಗಾಯತ ಸಮಾಜದ ನಾಯಕರು ತುಳಿತಕ್ಕೊಳಗಾಗಿದ್ದಾರೆ.
ಲಿಂಗಾಯತರ ಪ್ರಾಬಲ್ಯ ಇರುವ ಕ್ಷೇತ್ರದರಿಂದ ಆರಿಸಿ ಬಂದಿರುವ ಅವರಿಗೆ ಅಧಿಕಾರದ ಮದ ತೆಲೆಗೆ ಎರಿದೆ ಎಂದು ಕಿಡಿಕಾರಿದರು.
ಹೀಗಾಗಿ ಧಾರವಾಡ ಮತ ಕ್ಷೇತ್ರದಿಂದ ಪ್ರಹ್ಲಾದ ಜೋಶಿಯವರನ್ನು ಇದೇ ಮಾ. 31ರೊಳಗೆ ಹೈಕಮಾಂಡ್ ಬದಲಾವಣೆ ಮಾಡದಿದ್ದಲ್ಲಿ ಏ.2 ರಂದು ಮಠಾಧಿಪತಿಗಳು ಮತ್ತೆ ಸಭೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರು ಎಚ್ಚರಿಸಿದರು.